ಅಂತರಾಷ್ಟ್ರೀಯ

‘ಪಾಕ್ ಸೈನಿಕನ ಹತ್ಯೆಗೆ ಮೂವರು ಭಾರತೀಯ ಸೈನಿಕರ ಹತ್ಯೆ’: ಪಾಕ್

Pinterest LinkedIn Tumblr

armyಇಸ್ಲಾಮಾಬಾದ್: ಹಲವು ಪ್ರತೀಕಾರಗಳ ಬಳಿಕ, ಪಾಕ್ ರಕ್ಷಣಾ ಸಚಿವ ಅಸೀಫ್ ಅವರು, ಪಾಕಿಸ್ತಾನದ ಓರ್ವ ಸೈನಿಕನನ್ನು ಕೊಂದರೆ, ಮೂವರು ಭಾರತೀಯ ಸೈನಿಕರ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಮೂಲಕ, ಪಾಕ್ ವಿರುದ್ದ ಕದನ ಸಾರಿದರೆ, ಭಾರತ ಗಂಭೀರ ಪರಿಣಾಮ ಎದುರಿಸಲಿದೆ ಎಂದು ಎಚ್ಚರಿಕೆ ನೀಡಿದ್ಧಾರೆ.

ಪಾಕ್ ಆಕ್ರಮಿತ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಭಾರತ ಸರ್ಕಾರವು ಉದ್ದೇಶ ಪೂರ್ವಕವಾಗಿ ಸೃಷ್ಟಿಸಿದ್ದು, ಮುಂದಿನ ವಿಧಾನ ಸಭಾ ಚುನಾವಣೆಗೆ ಸ್ಥಳೀಯರ ಮನ ಗೆಲ್ಲುವುದು ಈ ಹಿಂದಿನ ಉದ್ದೇಶವಾಗಿದೆ. ಪಾಕ್ ಉಗ್ರವಾದದ ಹಿಂದೆ ಭಾರತದ ಕೈವಾಡವಿದೆ ಮತ್ತು ಇದರ ವಿರುದ್ದವೇ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪಾಕಿಸ್ತಾನದ ಉಗ್ರ ಚಟುವಟಿಕೆಗಳಲ್ಲಿ ಭಾರತ ಭಾಗಿಯಾಗಿರುವ ಕುರಿತು, ಈಗಾಗಲೇ ಯು.ಎನ್ ಗೆ ಕಡತ ಹಾಗೂ ವಿಡಿಯೋ ಅವತರಣಿಕೆಗಳನ್ನು ನೀಡಿದ್ದೇವೆ ಎಂದು ಆಸಿಫ್ ಹೇಳಿದರು.

ಆರ್ಥಿಕವಾಗಿ, ಪಾಕ್ ಭಾರತದಿಂದ ದುರ್ಬಲವಾಗಿರಬಹುದು, ಆದರೆ, ಚೀನಾ- ಪಾಖ್ ಆರ್ಥಿಕ ಕಾರಿಡಾರ್ ಸಂಪನ್ನಗೊಂಡರೆ ಇಸ್ಲಾಮಾಬಾದ್ ಸದೃಢಗೊಳ್ಳುವುದು ಎಂದು ಆಶಾಭಾವ ವ್ಯಕ್ತಪಡಿಸಿದರು.

Comments are closed.