ಪಾಕಿಸ್ತಾನದ ಸತ್ತಾರ್ ಬಕ್ಷ್ ಎನ್ನುವ ಹೆಸರಿನ ಹೋಟೆಲ್ ಶಾಂತಿ ಮಂತ್ರ ಹರಡಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಅದು ವಿಶೇಷ ಫಿಜ್ಜಾ ತಯಾರಿಸಿ ಅದರ ಮೂಲಕ ಶಾಂತಿ ಹರಡಲು ಮುಂದಾಗಿದೆ.
ಭಾರತ-ಪಾಕಿಸ್ತಾನ ನಿಯಂತ್ರಣ ರೇಖೆಯ ಬಳಿಯ ಉಗ್ರ ಉರಿ ದಾಳಿ ಪ್ರತಿಯೊಬ್ಬರ ಕುರ್ಚಿಯ ತುದಿಯಲ್ಲಿ ಕೂರುವಂತೆ ಮಾಡಿದೆ. ಈ ಪ್ರಕರಣ ಎರಡು ದೇಶಗಳ ನಡುವಿನ ಎಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಈ ನಡುವೆ ಪಾಕಿಸ್ತಾನದ ಹೋಟೆಲ್ ಒಂದು ವಿಶೇಷ ತಿನಿಸೊಂದನ್ನು ತಯಾರಿಸಿ ಎರಡು ದೇಶದ ನಾಗರಿಕರಿಗೆ ಹಂಚುವ ಮೂಲಕ ಎರಡು ದೇಶಗಳಲ್ಲಿ ಶಾಂತಿ ನೆಲೆಸುವಂತೆ ಮಾಡಲು ಮುಂದಾಗಿದೆ.
ಪಾಕಿಸ್ತಾನಿಯರು ಮೂಲ ಹಾಗೂ ದೇಶಿಯ ಪದ್ಧತಿ ಇಷ್ಟಪಡುವ ಕಾರಣ ಅಂತಾರಾಷ್ಟ್ರೀಯ ಪಾನೀಯ ಕಂಪನಿಯೊಂದು ಪಾಕಿಸ್ತಾನದಲ್ಲಿ ಸತ್ತಾರ್ ಬಕ್ಷ್ ಎನ್ನುವ ಹೆಸರಿನ ಹೋಟೆಲ್ ಆರಂಭಿಸಿದೆ.
ಈ ಸತ್ತಾರ್ ಬಕ್ಷ್ ಹೋಟೆಲ್ ಪಾಕಿಸ್ತಾನದಲ್ಲಿ ಉತ್ತಮ ತಾಣವಾಗಿ ಮಾರ್ಪಟ್ಟಿದೆ. ಅನೇಕರಿಗೆ ಅದು ಬಹು ಅಚ್ಚುಮೆಚ್ಚಿನ ಸ್ಥಳ. ಕೆಲವರಿಗಂತೂ ಪದೇ ಪದೇ ಭೇಟಿ ನೀಡುವ ತಾಣವಾಗಿದೆ.
ಯಾವ ವಿಶೇಷ ತಿನಿಸು ತಯಾರಿಸುವ ಮೂಲಕ ಈ ಹೋಟೆಲ್ ಚಮತ್ಕಾರಕ್ಕೆ ಮುಂದಾಗಿದೆ ಗೊತ್ತಾ? ಅದೇ ಎಲ್ಒಸಿ ಫಿಜ್ಜಾ, ಈ ಫಿಜ್ಜಾದ ಒಂದು ಭಾಗ ಗೋಮಾಂಸದಿಂದ ತಯಾರಿಸಿದ್ದರೆ, ಮತ್ತೊಂದು ಭಾಗವನ್ನು ತರಕಾರಿಯಿಂದ ತಯಾರಿಸಲಾಗಿದೆ. ಗೋಮಾಂಸದ ಭಾಗ ಪಾಕಿಸ್ತಾನವನ್ನು ಪ್ರತಿನಿಧಿಸಿದರೆ, ತರಕಾರಿ ತಿನಿಸಿನ ಭಾಗ ಭಾರತವನ್ನು ಪ್ರತಿನಿಧಿಸುತ್ತಿದೆ. ಈ ಹೋಟೆಲ್ ಮೆನೆ ಹೊರತುಪಡಿಸಿ ಈ ಹೋಟೆಲ್ ಪರಿಸರ ಪ್ರೇಮಿಗಳಿಗೆ ಇಷ್ಟವಾಗುವ ರೀತಿ ವಿವಿಧ ಚಿತ್ತಾರಗಳುಳ್ಳ ಪುರಾತನ ಮಾದರಿಯ ಕುರ್ಚಿಗಳಿಂದ ಅಲಂಕರಿಸಲಾಗಿದೆ. ಇನ್ನುಳಿದಂತೆ ಚಾಯ್ ಪ್ರಿಯರಿಗೆ ಈ ಹೋಟೆಲ್ ಬಹು ತಂಪಾದ ತಾಣವಾಗಿ ಮಾರ್ಪಟ್ಟಿದೆ.
ಹೋಟೆಲ್ ಮೆನುವಿನಲ್ಲಿ ಅನೇಕ ವಿಧದ ತಿನಿಸುಗಳನ್ನು ಸಹ ನಮೂದಿಸಲಾಗಿದ್ದು, ಅವುಗಳಲ್ಲಿ ಕೆಲವು ನಾಚಿಕೆ ಇಲ್ಲದೆ ಮೇಲುಡುಪು ತರ ಬರ್ಗರ್ , ಮಸಾಲೆ ಫಿಜ್ಜಾ, ಜಿಂಗಾಲಾಲಾ ತಿನಿಸುಗಳಿಂದ ಕೂಡಿದೆ. ಈ ಫಿಜ್ಜಾ ಸೇವಿಸಿರುವ ಕೆಲವರು ನಿಜಕ್ಕೂ ಇದು ಆತ್ಮ ಮತ್ತು ಶರೀರಕ್ಕೆ ಉತ್ತಮ ಪೌಷ್ಟಿಕಾಂಶ ಎಂದಿದ್ದಾರೆ. ಇದು ನಿಜವಾದ ಪ್ರೀತಿ ಎಂದಿದ್ದಾರೆ.
Comments are closed.