ಅಂತರಾಷ್ಟ್ರೀಯ

ಇಂಡಿಯಾದ ಮೇಲೆ ದಾಳಿಗೆ ಉಗ್ರರಿಗೆ ಅನುಮತಿಸಿ: ಮಸೂದ್ ಅಜರ್

Pinterest LinkedIn Tumblr

masood-azhar11ಕರಾಚಿ: ಕೆಲ ದಿನಗಳ ಹಿಂದೆಯಷ್ಟೇ ಭಾರತಕ್ಕೆ ಸರ್ಜಿಕಲ್ ಸ್ಟ್ರೈಕ್ ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ ಎಂದು ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಡೈಲಾಗ್ ಹೊಡೆದಿದ್ದಾರೆ ಜೈಷ್- ಇ- ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಈಗ ಭಾರತದ ಮೇಲೆ ಜಿಹಾದಿ ಯುದ್ಧ ಮಾಡಲು ಅನುಮತಿ ನೀಡುವಂತೆ ಪಾಕ್ ಸರ್ಕಾರಕ್ಕೆ ಆಗ್ರಹಿಸಿದ್ದಾನೆ.

ಭಾರತದ ಮೇಲೆ ದಾಳಿ ಮಾಡಲು ಉತ್ತಮ ಸುಸುಮಯ ಒದಗಿ ಬಂದಿದೆ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಲು ನಮಗೆ ಸಿಕ್ಕಿರುವ ಐತಿಹಾಸಿಕ ಅವಕಾಶವಿದು. ಇದನ್ನು ಬಳಸಿಕೊಳ್ಳೊವಂತೆ ಆತ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳಿಗೆ ಅಜರ್ ಕರೆಕೊಟ್ಟಿದ್ದಾನೆ.

ಇದನ್ನೂ ಓದಿ: ಭಾರತಕ್ಕೆ ನಿಜವಾದ ಸರ್ಜಿಕಲ್ ಸ್ಟ್ರೈಕ್ ಹೇಗೆ ಇರುತ್ತೆ ಅಂತ ನಾವು ತೋರಿಸಿಕೊಡ್ತೀವಿ: ಉಗ್ರ ಹಫೀಜ್ ಸಯೀದ್

ಈತನ ವಿಕೃತ ಸಂದೇಶವು ಜೈಷ್ ಸಂಘಟನೆಯ ವಾರಪತ್ರಿಕೆಯಾದ ಅಲ್ ಖುಲಂನಲ್ಲಿ ಪ್ರಕಟಗೊಂಡಿದೆ. ಈ ಸಂದೇಶದಲ್ಲಿ ಭಾರತದ ಸೇನೆ ಕೈಗೊಂಡ ಈ ದಾಳಿಯ ವಿರುದ್ಧ ಸೇಡು ತಿರಿಸಿಕೊಳ್ಳಲು ಇದು ಸುವರ್ಣಾವಕಾಶವೆಂದು ಪಾಕಿಸ್ತಾನ ಸರ್ಕಾರಕ್ಕೆ ತಿಳಿಸಿದ್ದಾನೆ.

ಪಾಕಿಸ್ತಾನ ಸರ್ಕಾರವು ಕಾಶ್ಮೀರ ಸಮಸ್ಯೆ ಬಗೆಹರಿಸುವ ಬಗ್ಗೆ ಸ್ವಲ್ಪ ಗಮನಹರಿಸಿದರೆ ಸಾಕು, ನಾವು ಮುಂದೆ ನುಗ್ಗಿ ಭಾರತದ ಮೇಲೆ ದಾಳಿ ಮಾಡಿ 1971ರ ಯುದ್ದದ ಕಹಿ ನೆನಪನ್ನು 2016ರಲ್ಲಿ ಅಳಿಸಿಹಾಕುತ್ತೆವೆ ಎಂದು ಬರೆದುಕೊಂಡಿದ್ದಾನೆ.

ಭಾರತ ಉಗ್ರಗಾಮಿಗಳನ್ನು ನಾಶ ಮಾಡುವ ನೆಪದಲ್ಲಿ ಪಾಕಿಸ್ತಾನವನ್ನು ಕೆರಳಿಸುತ್ತಿದೆ.ಕಾಶ್ಮೀರ ಸಮಸ್ಯೆಯನ್ನು ಜಟಿಲಗೊಳಿಸಿತ್ತಿದೆ. ಪಾಕ್ ನಲ್ಲಿ ನೆಡೆಯಬೇಕಿದ್ದ ಸಾರ್ಕ್ ಸಭೆಯನ್ನು ಬಹಿಷ್ಕರಿಸಿ ನಮಗೆ ಅವಮಾನ ಮಾಡಿದೆ. ಗಡಿ ನಿಯಂತ್ರಣ ರೇಖೆ ಬಳಿ ಕಳೆದ 90 ದಿನಗಳಿಂದ ಎಷ್ಟೊಂದು ಮುಸ್ಲಿಮ್ ಉಗ್ರರು ಹುತಾತ್ಮರಾಗಿದ್ದಾರೆ? ಎಷ್ಟೊಂದು ಮಂದಿ ಗಾಯಗೊಂಡಿದ್ದಾರೆ? ಇವುಗಳನ್ನು ಸಹಿಸಿಕೊಂಡು ನಾವು ಸುಮ್ಮನೇ ಇರಬೇಕೇ ಎಂದು ಆತ ಸರ್ಕಾರವನ್ನು ಪ್ರಶ್ನಿಸಿದ್ದಾನೆ.

Comments are closed.