ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನ್ನೆಯಷ್ಟೇ ಮಾವಿನ ಹಣ್ಣು ಕಳುಹಿಸಿಕೊಡುವ ಮೂಲಕ ಸ್ನೇಹ ಹಸ್ತ ಚಾಚಿದ್ದ ಪಾಕಿಸ್ತಾನ ಇದೀಗ ಪೇಶಾವರ ಸೇನಾ ಶಾಲೆ ಮೇಲೆ ನಡೆದ ಉಗ್ರರ ದುಷ್ಕೃತ್ಯದಲ್ಲಿ ಭಾರತದ ಕೈವಾಡವಿದೆ ಎನ್ನುವ ಮೂಲಕ ಮತ್ತೆ ತನ್ನ ಗೋಸುಂಬಿ ಮುಖವನ್ನು ಪ್ರದರ್ಶಿಸಿದೆ.
ಭಾರತ, ಪಾಕಿಸ್ತಾನದ ಆಂತರಿಕ ವಿಚಾರದಲ್ಲಿ ಪದೇ ಪದೇ ಮೂಗು ತೂರಿಸುತ್ತಿದ್ದು ಕರಾಚಿ ಮಾತ್ರವಲ್ಲದೇ ಬಲೂಚಿಸ್ತಾನದಲ್ಲೂ ಭಾರತೀಯ ಸೇನೆ ನಿರಂತರವಾಗಿ ಫೈರಿಂಗ್ ನಡೆಸುತ್ತಿದೆ ಎಂದು ಆರೋಪಿಸಿರುವ ಪಾಕ್ ಕಳೆದ ಕೆಲ ತಿಂಗಳ ಹಿಂದೆ ಪೇಶಾವರದ ಶಾಲೆಯಲ್ಲಿ ನಡೆದ ಕೃತ್ಯದ ಹಿಂದೆ ಭಾರತದ ಕೈವಾಡವೂ ಇದೆ ಎಂದು ಆರೋಪಿಸಿದೆ. ಅಲ್ಲದೇ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಪಾಕ್ ಸಿದ್ದಪಡಿಸುತ್ತಿದ್ದು ಅಂತರಾಷ್ಟ್ರೀಯ ಸಮುದಾಯದ ಮುಂದೆ ಇಡಲು ನಿರ್ಧರಿಸಿದೆ ಎನ್ನಲಾಗಿದೆ.
ಕರಾಚಿಯ ಪೇಶಾವರ ಸೈನಿಕ ಶಾಲೆಯಲ್ಲಿ ಉಗ್ರರು ಬಾಂಬ್ ಸ್ಪೋಟಿಸಿ 132 ಅಮಾಯಕ ಮಕ್ಕಳ ಸಾವಿಗೆ ಕಾರಣರಾಗಿದ್ದರು. ಆದರೆ ತನ್ನ ದೇಶದಲ್ಲಿನ ಉಗ್ರರನ್ನು ನಿಗ್ರಹಿಸಲಾಗದ ಪಾಪಿ ಪಾಕ್ ಇದೀಗ ಈ ಉಗ್ರ ಕೃತ್ಯದ ಹಣೆಪಟ್ಟಿಯನ್ನು ಭಾರತದ ತಲೆಗೆ ಕಟ್ಟಲು ಮುಂದಾಗಿರುವುದು ನಿಜಕ್ಕೂ ತನ್ನ ಹತಾಶೆಯನ್ನು ತೋರಿಸುತ್ತಿರುವುದಂತೂ ಸ್ಪಷ್ಟ.