ರಾಷ್ಟ್ರೀಯ

ಅಧಿಕಾರಿಗಳು ನಿಮ್ಮ ಕಷ್ಟಗಳನ್ನು ಕೇಳದೇ ಇದ್ದರೆ ಬಿದಿರು ಕೋಲಿನಿಂದ ಬಾರಿಸಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

Pinterest LinkedIn Tumblr

ಬೇಗುಸರಾಯ್: ಲೋಕಸಭಾ ಕ್ಷೇತ್ರ ಬಿಹಾರದ ಬೇಗುಸರಾಯ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು, ‘ಅಧಿಕಾರಿಗಳು ನಿಮ್ಮ ಕಷ್ಟಗಳನ್ನು ಕೇಳದೇ ಇದ್ದರೆ ಬಿದಿರು ಕೋಲು ತೆಗೆದುಕೊಂಡು ಬಾರಿಸಿ’ ಎಂದು ಹೇಳಿದ್ದಾರೆ.

‘ಸಣ್ಣ ಸಣ್ಣ ವಿಷಯಗಳನ್ನು ಹಿಡಿದುಕೊಂಡ ನನ್ನ ಬಳಿ ಬರುವವರಿಗೆ ನಾನೊಂದು ವಿಚಾರ ಹೇಳುತ್ತೇನೆ. ಶಾಸಕರು, ಸಂಸದರು, ಗ್ರಾಮದ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಇವರೆಲ್ಲರೂ ಜನರಿಗೆ ಸೇವೆ ಮಾಡಲೆಂದೇ ಇರುವವರು. ಇವೆರೆಲ್ಲಾ ನಿಮ್ಮ ಮಾತನ್ನು ಕೇಳದೇ ಹೋದರೇ, ಎರಡೂ ಕೈಗಳಲ್ಲಿ ಬಿದಿರು ಕೋಲು ಹಿಡಿದುಕೊಂಡು ಅವರ ತಲೆಗೆ ಬಾರಿಸಿ’ ಎಂದು ಗಿರಿರಾಜ್‌ ಸಿಂಗ್‌ ಹೇಳಿದ್ದಾರೆ.

Comments are closed.