ಮಥುರಾ: ಇಲ್ಲಿನ ಶ್ರೀಕೃಷ್ಣನ ಜನ್ಮಭೂಮಿ ಬಳಿ ಇರುವ ಶಾಹಿಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಕೋರಿ ಮಥುರಾ ನ್ಯಾಯಾಲಯವೊಂದಕ್ಕೆ ಮೂರನೇ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಸಿವಿಲ್ ನ್ಯಾಯಾಧೀಶರಾದ ನೇಹಾ ಭದೌರಿಯಾ ಅವರ ನ್ಯಾಯಾಲಯದಲ್ಲಿ ಈ ಅರ್ಜಿ ಸಲ್ಲಿಸಲಾಗಿದ್ದು, ಮಥುರಾ ನ್ಯಾಯಾಲಯವೊಂದರ ತೀರ್ಪಿನಂತೆ 1968ರಲ್ಲಿ ಮಾಡಿಕೊಂಡ ಸಂಧಾನವನ್ನು ಅಸಿಂಧುಗೊಳಿಸುವಂತೆ ಕೋರಲಾಗಿದೆ. ‘ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಮಸೀದಿಯನ್ನು ಸ್ಥಳಾಂತರಗೊಳಿಸಬೇಕು ಎನ್ನುವುದೇ ಅರ್ಜಿಯೇ ಮುಖ್ಯ ಮನವಿ’ ಎಂದು ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದರು.
ಮುಖ್ಯ ಅರ್ಚಕರಾದ ವಿರಾಜಮಾನ್ ಠಾಕೂರ್ ಕೇಶವ್ ದೇವ್ ಜಿ ಮಹಾರಾಜ್ ಕತ್ರ ಕೇಶವ್ ದೇವ್, ವಕೀಲರಾದ ರಾಜೇಂದ್ರ ಮಹೇಶ್ವರಿ, ಯುನೈಟೆಡ್ ಹಿಂದೂ ಫ್ರಂಟ್ನ ಜೇ ಭಗವಾನ್ ಗೋಯಲ್, ಧರ್ಮ ರಕ್ಷ ಸಂಘ ವೃಂದಾವನದ ಅಧ್ಯಕ್ಷ ಸೌರಬ್ ಗೌರ್ ಜಂಟಿಯಾಗಿ ಈ ಅರ್ಜಿ ಸಲ್ಲಿಸಿದ್ದಾರೆ.
Comments are closed.