ರಾಷ್ಟ್ರೀಯ

ಸರೋವರದಲ್ಲಿ ಮಗುಚಿ ಬಿದ್ದ ಬಿಜೆಪಿ ಪರ ಚುನಾವಣಾ ಪ್ರಚಾರನಿರತ ಬೋಟ್

Pinterest LinkedIn Tumblr


ಶ್ರೀನಗರ: ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ಶಿಖರ ಬೋಟ್ ಶ್ರೀನಗರದ ದಾಲ್ ಸರೋವರದ ನೀರಿನಲ್ಲಿ ಮಗುಚಿ ಬಿದ್ದ ಪರಿಣಾಮ ಕನಿಷ್ಠ ನಾಲ್ವರು ಬಿಜೆಪಿ ನಾಯಕರು ನದಿಗೆ ಬಿದ್ದಿರುವ ಘಟನೆ ವರದಿಯಾಗಿದೆ.

ತಕ್ಷಣವೇ ಎಲ್ಲರನ್ನೂ ರಕ್ಷಿಸಲಾಗಿದೆ. ಪ್ರವಾಸಿಗರ ಪ್ರಮುಖ ಆಕರ್ಷಣೆಯಾದ ಪ್ರಸಿದ್ಧ ಜಮ್ಮು-ಕಾಶ್ಮೀರದ ದಾಲ್ ಸರೋವರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿ ಪಕ್ಷವು ಶಿಖರ ಅಭಿಯಾನವನ್ನು ಆಯೋಜಿಸಿತ್ತು.

ನದಿಯಲ್ಲಿ ಉರುಳಿಬಿದ್ದ ಶಿಖರ ಬೋಟ್ ನಲ್ಲಿದ್ದ ಬಿಜೆಪಿ ಕಾರ್ಯಕರ್ತರು, ಪತ್ರಕರ್ತರನ್ನು, ಸ್ಥಳೀಯರು ಹಾಗೂ ರಾಜ್ಯವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ.

ಬೋಟ್ ನಲ್ಲಿ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ.ದಾಲ್ ಲೇಕ್ ನಲ್ಲಿ ನಾವು ಉತ್ತಮ ರ್ಯಾಲಿಯನ್ನು ಮಾಡಿದ್ದೇವೆ ಎಂದು ಬಿಜೆಪಿ ನಾಯಕ ಶಹನವಾಝ್ ಹುಸೇನ್ ಹೇಳಿದ್ದಾರೆ.

ಶಿಖರ ಎನ್ನುವುದು ಶ್ರೀನಗರದ ಹೆಚ್ಚಿನ ಜಲಮೂಲಗಳಲ್ಲಿ ಸಾರಿಗೆಗೆ ಬಳಸುವ ಮರದ ದೋಣಿ. ಇದು ಜಮ್ಮು-ಕಾಶ್ಮೀರದ ಸಾಂಸ್ಕೃತಿಕ ಸಂಕೇತವಾಗಿದೆ.

Comments are closed.