
ಲಖನೌ: ಉತ್ತರ ಪ್ರದೇಶದ ಸರ್ಕಾರ ಲವ್ ಜಿಹಾದ್ ಕಾಯ್ದೆ ಜಾರಿಗೆ ತಂದು ಎರಡು ದಿನಗಳು ಕಳೆಯುವುದರೊಳಗೆ ಎರಡನೇ ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಹಿಂದೂವೆಂದು ನಂಬಿಸಿ ಮದುವೆಯಾದ ಯುವಕ, ಪತ್ನಿ ಗರ್ಭವತಿ ಆದ ನಂತರ ಮತಾಂತರವಾಗುವ ಒತ್ತಾಯ ಮಾಡಿರುವ ಘಟನೆ ರಾಜ್ಯದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಹಿಂದೂ ಧರ್ಮದ ಯುವತಿಗೆ ಫೇಸ್ಬುಕ್ನಲ್ಲಿ ಕುನಾಲ್ ಶರ್ಮಾ ಹೆಸರಿನ ಯುವಕನೊಂದಿಗೆ ಸ್ನೇಹ ಬೆಳೆದಿದ್ದು, ಅದು ಪ್ರೀತಿಗೆ ತಿರುಗಿದೆ. ಇವರಿಬ್ಬರು ದೋಪೇಶ್ವರ ನಾಥ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ದಂಪತಿ ಆಗಾಗ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು. ಸುಖ ಸಂಸಾರ ನಡೆಸುತ್ತಿದ್ದ ಈ ಕುಟುಂಬಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿತ್ತು. ಯುವತಿ ಗರ್ಭವತಿ ಆಗಿದ್ದಾಳೆ. ಆದರೆ ಅಷ್ಟರಲ್ಲಾಗಲೇ ತನ್ನ ನಿಜ ರೂಪ ತೋರಲಾರಂಭಿಸಿದ ಪತಿ, ಆಕೆಯ ಹೊಟ್ಟೆಗೆ ಒದ್ದು ಗರ್ಭಪಾತವಾಗುವಂತೆ ಮಾಡಿದ್ದಾನೆ. ನನ್ನ ಹೆಸರು ಕುನಾಲ್ ಅಲ್ಲ ತಾಹಿರ್ ಹುಸೇನ್ ಎಂದು ಹೇಳಿದ್ದಾನೆ. ನನ್ನ ಜತೆ ಬದುಕಲು ನೀನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲೇ ಬೇಕು ಎಂದು ಹೆದರಿಸಿದ್ದಾನೆ. ಒಂದು ವೇಳೆ ಮತಾಂತರವಾಗದಿದ್ದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾನೆ.
ಮೋಸ ಹೋದ ನಂತರ ಎಚ್ಚೆತ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
Comments are closed.