ಪಾಟ್ನಾ: ಮುಖ್ಯಮಂತ್ರಿ ಕುರ್ಚಿಗೆ ನಾನು ಅಂಟಿಕೊಂಡಿಲ್ಲ. ಎನ್ಡಿಎ ಮೈತ್ರಿಗೆ ನಾವು ಒಳಪಟ್ಟಿದ್ದು, ಮಿತ್ರ ಪಕ್ಷಗಳ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ. ಮುಖ್ಯಮಂತ್ರಿ ಸ್ಥಾನವೇ ಬೇಕು ಎಂದು ಕೇಳಿಲ್ಲ. ಜನರು ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ನೀಡಿತ್ತು. ನಾವು ಸರ್ಕಾರ ರಚಿಸುತ್ತೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿ ಮಾಧ್ಯಮದ ಮುಂದೆ ಮಾತನಾಡಿದ ಅವರು, ಚಿರಾಗ್ ಪಾಸ್ವಾನ್ ಅವರ ಲೋಕ್ ಜನಶಕ್ತಿ ಪಕ್ಷ ಜೆಡಿಯು ಸ್ಥಾನಗೆಲ್ಲುವ ತಂತ್ರಕ್ಕೆ ಭಾರೀ ಪೆಟ್ಟು ನೀಡಿ, ಪಕ್ಷಕ್ಕೆ ಹಾನಿ ಮಾಡಿತು ಎಂದು ಅವರು ಒಪ್ಪಿಕೊಂಡರು.
ಇದೇ ವೇಳೆ ರಾಜ್ಯದಲ್ಲಿ ತಮಗೆ ಹಾನಿ ಮಾಡಿರುವ ಎಲ್ಜೆಪಿಯೊಂದಿಗೆ ಎಲ್ಲಾ ಸಂಬಂಧಗಳನ್ನು ಬೇರೆ ಮಾಡಬೇಕಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇದು ಬಿಜೆಪಿಯ ನಿರ್ಧಾರ ಎಂದರು. ಕಾರಣ ಎಲ್ಜೆಪಿ ಕೇಂದ್ರದಲ್ಲಿ ಬಿಜೆಪಿಯೊಂದಿಗೆ ಮೈತ್ರಿಹೊಂದಿದ್ದು, ರಾಜ್ಯದಲ್ಲಿ ಯಾವ ನೀತಿ ಕೈಗೊಳ್ಳಬಹುದು ಎಂಬ ಕುತೂಹಲ ಮೂಡಿದೆ.
ಜೆಡಿಯಿ ಕಡಿಮೆ ಸ್ಥಾನಗಳನ್ನು ಗೆದ್ದ ಬಗ್ಗೆ ಎಲ್ಜೆಪಿ ದೂಷಿಸುತ್ತಿದೆ, ಅಲ್ಲದೇ ಎಲ್ಜೆಪಿ ಜೆಡಿಯುಗೆ ಮತ ಕಡಿಮೆಗೊಳಿಸಿ ಪಕ್ಷದ ಭವಿಷ್ಯವನ್ನು ಹಾನಿ ಮಾಡಿದೆ ಎಂಬ ಆರೋಪಿಸಲಾಗಿದೆ. ಈ ಹಿನ್ನಲೆ ಎಲ್ಜೆಪಿ ವಿರುದ್ಧ ನಿತೀಶ್ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಎನ್ಡಿಎಯಲ್ಲಿ ಎಲ್ಜೆಪಿಯನ್ನು ಉಳಿಸಿಕೊಳ್ಳಬೇಕೆ ಬೇಡವೇ ಎಂದು ನಿರ್ಧರಿಸುವುದು ಬಿಜೆಪಿ ಎಂದರು.
ನಾವು ಚುನಾವಣೆಯಲ್ಲಿ ಎನ್ಡಿಎ ಪರವಾಗಿ ಪ್ರಚಾರ ಮಾಡಿದೆವು. ಕೆಲವು ಕಡೆ ಎಲ್ಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ, ನಮ್ಮ ಮತಗಳನ್ನು ಕಡಿಮೆ ಮಾಡಿದವು. ಎಲ್ಜೆಪಿ ನಮ್ಮನ್ನು ಸೋಲಿಸಲು ನಡೆಸಿದ ಪ್ರಯತ್ನ ಎಂಬುದು ಇದು ಸ್ಪಷ್ಟವಾಗಿದೆ ಎಂದು ಪರೋಕ್ಷವಾಗಿ ತಿಳಿಸಿದರು. ಅಲ್ಲದೇ ಇದೇ ಮಾಧ್ಯಮಗಳು ವಿಶ್ಲೇಷಣೆ ನಡೆಸಿದೆ ಎಂದರು.
Comments are closed.