ರಾಷ್ಟ್ರೀಯ

ದೆಹಲಿ ಕೋಮು ಗಲಭೆ ಪ್ರಕರಣ: ಸಮನ್ಸ್​ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಫೇಸ್​ಬುಕ್​

Pinterest LinkedIn Tumblr


ದೆಹಲಿ: ದೆಹಲಿ ಕೋಮು ಗಲಭೆಯಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಸಮನ್ಸ್​ ವಿರುದ್ಧ ಉಪಾಧ್ಯಕ್ಷ ಅಜಿತ್​ ಮೋಹನ್​ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ಸರ್ವೋಚ್ಛ ನ್ಯಾಯಾಲಯ ಈ ಅರ್ಜಿ ಕೈಗೆತ್ತಿಕೊಳ್ಳಲಿದೆ. .

ಗಲಭೆಗೆ ಸಾಮಾಜಿಕ ಜಾಲತಾಣದ ವೇದಿಕೆ ಸಹಭಾಗಿತ್ವ ನೀಡಿದ ಆರೋಪದ ಕುರಿತು ದೆಹಲಿ ವಿಧಾನಸಭೆ ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಫೇಸ್​ಬುಕ್​ ಇಂಡಿಯಾ ಉಪಾಧ್ಯಕ್ಷರಿಗೆ ಸಮನ್ಸ್​ ಜಾರಿ ಮಾಡಲಾಗಿತ್ತು.

ಈ ಪ್ರಕರಣ ಈಗಾಗಲೇ ಸಂಸದೀಯ ಸಮಿತಿ ಮುಂದೆ ಇರುವುದರಿಂದ ದೆಹಲಿ ವಿಧಾನ ಸಭೆ ಮುಂದೆ ಹಾಜರಾಗುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಫೇಸ್​ಬುಕ್​ ಇಂಡಿಯಾ ಮುಖ್ಯಸ್ಥರು ಅರ್ಜಿ ಸಲ್ಲಿಸಿದ್ದಾರೆ.

ನಿಯಮವನ್ನು ಗಾಳಿಗೆ ತೂರಿ ಫೇಸ್​ಬುಕ್​ ದ್ವೇಷ ಭಾವನೆಗೆ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿದ ಆರೋಪದ ಮೇಲೆ ಅವರಿಗೆ ಸಮನ್ಸ್​ ಜಾರಿ ಮಾಡಲಾಗಿತ್ತು. ಹಲವು ಬಾರಿ ಸಮನ್ಸ್​ ನೀಡಿದರೂ ಹಾಜರಾಗಲೂ ವಿಫಲರಾದ ಹಿನ್ನಲೆ ಭಾನುವಾರ ಸಮಿತಿ ಹೊಸ ಮತ್ತು ಅಂತಿಮಬಾರಿಗೆ ಸಮನ್ಸ್​ ಜಾರಿ ಮಾಡಿತ್ತು.

Comments are closed.