ರಾಷ್ಟ್ರೀಯ

ಇಂದಿನಿಂದ ಎರಡು ದಿನ ಬ್ಯಾಂಕ್ ಮುಷ್ಕರ, ಎಟಿಎಂ ಸ್ಥಗಿತ ಸಾಧ್ಯತೆ!

Pinterest LinkedIn Tumblr


ಹೊಸದಿಲ್ಲಿ: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಅಖಿಲ ಭಾರತ ರಾಷ್ಟ್ರೀಕೃತ ಬ್ಯಾಂಕ್‌ ಅಧಿಕಾರಿಗಳ ಫೆಡರೇಶನ್‌ ಹಾಗು ಇತರ ಸಂಘಸಂಸ್ಥೆಗಳ ಒಕ್ಕೂಟ ಜನವರಿ 31 ಮತ್ತು ಫೆ.1ರಂದು ಎರಡು ದಿನಗಳ ಬ್ಯಾಂಕುಗಳ ಮುಷ್ಕರಕ್ಕೆ ಕರೆನೀಡಿದೆ.

ಬೇಡಿಕೆ ಈಡೇರದಿದ್ದರೆ ಏಪ್ರಿಲ್‌ 1ರಿಂದ ಅನಿರ್ಧಿಷ್ಟ ಕಾಲ ಮುಷ್ಕರವನ್ನೂ ಸಹ ಹಮ್ಮಿಕೊಂಡಿರುವುದಾಗಿ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ ತಿಳಿಸಿದೆ. ಮಾತ್ರವಲ್ಲ ಪುನಃ ಫೆ.11, 12, 13ರಂದು ಉಗ್ರ ಹೋರಾಟ ನಡೆಲಾಗುವುದು. ರಾಷ್ಟ್ರವ್ಯಾಪಿ ಮುಷ್ಕರದ ಕರೆಯಿಂದ ಬ್ಯಾಂಕುಗಳ ವಹಿವಾಟಿಗೆ ಧಕ್ಕೆಯಾಗಬಹುದು. ಖಾಸಗೀಕರಣಗೊಳಿಸುವ ಉದ್ದೇಶದಿಂದ ಸರಕಾರವು ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಮುಂದಾಗಿದೆ ಎಂದು ಕೆನರಾ ಬ್ಯಾಂಕ್‌ ಅಧಿಕಾರಿಗಳ ಅಸೋಸಿಯೆಶನ್‌ ಛೇರಮನ್‌ ಜೆ. ಎಸ್‌. ಜಗದೀಶ ತಿಳಿಸಿದ್ದಾರೆ.

ವೇತನ ಪರಿಷ್ಕರಣೆ, ಸಿಬ್ಬಂದಿ ಕಲ್ಯಾಣ ನಿಧಿಯ ಹಂಚಿಕೆ, ವಿಶೇಷ ವೇತನವನ್ನು ಮೂಲ ವೇತನದೊಡನೆ ವಿಲೀನಗೊಳಿಸುವುದು, ಬ್ಯಾಂಕುಗಳ ವಹಿವಾಟು ವಾರದಲ್ಲಿಐದು ದಿನಗಳಿಗೆ ಮಿತಿಗೊಳಿಸುವುದು, ಮತ್ತು ನಿವೃತ್ತ ಬ್ಯಾಂಕ್‌ ಅಧಿಕಾರಿಗಳ ಪಿಂಚಣಿಗೆ ಸಂಭಂದಿಸಿದ ಹಲವಾರು ಸಮಸ್ಯೆಗಳನ್ನು ತಕ್ಷಣವೆ ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ಫೆಡರೇಷನ್‌ ಒತ್ತಾಯಿಸಿದೆ.

ಈ ಹಿಂದೆಯೂ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ 2 ದಿನಗಳ ಬ್ಯಾಂಕ್ ಮುಷ್ಕರ ನಡೆಸಿತ್ತು. ಆಗ ಕೇಂದ್ರ ಹಣಕಾಸು ಇಲಾಖೆ ಬೇಡಿಕೆ ಪೂರೈಸುವುದಾಗಿ ಭರವಸೆ ನೀಡಿತ್ತು. ಆದರೆ ಇಲ್ಲಿವರೆಗೆ ಕೇಂದ್ರ ಸರಕಾರ ಕೊಟ್ಟಿರುವ ಭರವಸೆ ಈಡೇರಿಲ್ಲ. ಹೀಗಾಗಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇನ್ನು ಮುಷ್ಕರ ಹಿನ್ನೆಲೆಯಲ್ಲಿ ಎಟಿಎಂ ನಲ್ಲಿ ಕೂಡ ಹಣ ಇರುವ ಸಾಧ್ಯತೆ ತೀರಾ ಕಡಿಮೆ ಇದ್ದು, ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು.

Comments are closed.