ನೋಯ್ಡಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅಸ್ತು ನೀಡಿದೆ. ರಾಮ ಮಂದಿರ ನಿರ್ಮಾಣದ ವೇಳೆ ಮುಸ್ಲಿಮರು ಕೂಡಾ ಕೈಜೋಡಿಸಬೇಕು ಎಂದು ಮೊಘಲ್ ವಂಶದ ಪ್ರಿನ್ಸ್ ಯಾಕುಬ್ ಹಬೀಬುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ಪ್ರಿನ್ಸ್ ಯಾಕುಬ್, ಅಯೋಧ್ಯಾ ಪ್ರಕರಣ ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಹಿಂದೂ ಮತ್ತು ಮುಸ್ಲಿಮರು ಒಂದಾಗಿ ರಾಮ ಮಂದಿರ ನಿರ್ಮಾಣಕ್ಕೆ ಒಂದಾಗಿ ಬರಬೇಕು. ಅಯೋಧ್ಯ ಪ್ರಕರಣದಿಂದ ಹಿಂದೂ- ಮುಸ್ಲಿಂ ಸೌಹಾರ್ದತೆಯನ್ನು ವಿಶ್ವದ ಮುಂದೆ ಸಾರಬೇಕು ಎಂದು ಪ್ರಿನ್ಸ್ ಯಾಕೂಬ್ ಹೇಳಿದ್ದಾರೆ.
Comments are closed.