ರಾಷ್ಟ್ರೀಯ

ಸಜೀವ ಮಗುವನ್ನು ಹೂಳಲು ಬಂದ ಇಬ್ಬರು ಪೊಲೀಸರ ಬಲೆಗೆ

Pinterest LinkedIn Tumblr


ಹೈದರಾಬಾದ್(ತೆಲಂಗಾಣ): ಮಗುವನ್ನು ಜೀವಂತವಾಗಿ ಹೂಳಲು ಯತ್ನಿಸಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಗುರುವಾರ ಬೆಳಗ್ಗೆ ಜ್ಯುಬಿಲಿ ಬಸ್ ನಿಲ್ದಾಣದ ಮೈದಾನದಲ್ಲಿ ಇಬ್ಬರು ವ್ಯಕ್ತಿಗಳು ಬ್ಯಾಗ್ ವೊಂದನ್ನು ಹಿಡಿದು ನಿಂತಿರುವುದನ್ನು ರಿಕ್ಷಾ ಚಾಲಕರೊಬ್ಬರು ಗಮನಿಸಿದ್ದರು. ಅಲ್ಲದೇ ಅವರು ಮೈದಾನದಲ್ಲಿ ಗುಂಡಿ ತೋಡುತ್ತಿರುವುದನ್ನು ಗಮನಿಸಿದ ಚಾಲಕ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಬ್ಯಾಗ್ ನಲ್ಲಿ ಮಗು ಇರುವುದು ಪತ್ತೆಯಾಗಿತ್ತು. ಬಳಿಕ ಕರೀಂನಗರ್ ಜಿಲ್ಲೆಯ ನಿವಾಸಿಗಳಾದ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ, ಇದು ತನ್ನ ಮೊಮ್ಮಗಳು, ಇತ್ತೀಚೆಗಷ್ಟೇ ಆಪರೇಶನ್ ಮಾಡಿದ್ದರೂ ಕೂಡಾ ಅದು ಫಲಕಾರಿಯಾಗದೆ ಮಗು ಸಾವನ್ನಪ್ಪಿತ್ತು. ಅಲ್ಲದೇ ಮೃತದೇಹವನ್ನು ಸಾರ್ವಜನಿಕ ಸಾರಿಗೆಯಲ್ಲಿ ತರಲು ಅನುಮತಿ ನೀಡುವುದಿಲ್ಲ. ಹೀಗಾಗಿ ಮೈದಾನದಲ್ಲಿ ಶವ ಹೂಳಲು ಬಂದಿರುವುದಾಗಿ ತಿಳಿಸಿದ್ದರು.

ಆದರೆ ಚೀಲದಿಂದ ಮಗುವನ್ನು ಹೊರತೆಗೆದು ಪೊಲೀಸರು ಪರಿಶೀಲಿಸಿದಾಗ ಮಗು ಜೀವಂತಾಗಿತ್ತು! ಬಳಿಕ ಮಗುವನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿ ಮುಂದಿನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.