ರಾಷ್ಟ್ರೀಯ

ಜೂಜಾಟದಲ್ಲಿ 2 ಕೋಟಿ ಗೆದ್ದವನು ಹಣದ ಜೊತೆ ದೇಹದ ಅಂಗಾಂಗ ದಾನ ಮಾಡ್ತೀನಿ ಎಂದವನಿಗೆ ಜಿಲ್ಲಾಧಿಕಾರಿ ಏನಂದ್ರು ಗೊತ್ತಾ?

Pinterest LinkedIn Tumblr


ಇಸ್ಪೀಟ್​ ಆಟದಲ್ಲಿ ಲಕ್ಷ ಲಕ್ಷ ಕಳ್ಕೊಂಡು ಬರ್ಬಾದ್ ಆದವರನ್ನು ನೋಡಿದ್ದೀರಿ. ಆದರೆ ಕೋಟಿ ಕೋಟಿ ಗಳಿಸಿಕೊಂಡವರು ತೀರಾ ಕಡಿಮೆ. ಇಲ್ಲೊಬ್ಬ ಆಸಾಮಿ ಇಸ್ಪೀಟ್ ಆಡಿ ಕೋಟ್ಯಂತರ ರೂಪಾಯಿ ಗಳಿಸಿದ ಹಣವನ್ನು ಮರಳಿ ಸೋತವರಿಗೆ ನೀಡಲು ಮುಂದಾಗಿದ್ದಾನೆ.

ಈ ಅಪರೂಪದ ವ್ಯಕ್ತಿ ಆಂಧ್ರ ಪ್ರದೇಶದವನು. ಮದನಪಲ್ಲಿಯ 24 ವರ್ಷದ ಭಾವಾಜಿ ಜೂಜಾಟದಲ್ಲಿ 2 ಕೋಟಿ ಸಂಪಾದಿಸಿದ್ದನಂತೆ. ಅದೆನಾಯ್ತೋ ಏನೋ ಜೂಜಾಟದಲ್ಲಿ ಕಳ್ಕೊಂಡಿದ್ದರ ಬಗ್ಗೆ ಜಿಗುಪ್ಸೆ ಹೊಂದಿದ್ದಾನೆ. ತಾನು ಇಸ್ಪೀಟ್​ನಲ್ಲಿ ಗಳಿಸಿರುವ ಹಣ ಸೇರಿದಂತೆ ದೇಹದ ಅಂಗಾಂಗಗಳನ್ನೂ ದಾನ ಮಾಡುವುದಾಗಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದಾನೆ.

ಈತ ತಾನು ಗಳಿಸಿರುವ ಹಣದ ಜೊತೆ ಕಿಡ್ನಿ, ಕಣ್ಣನ್ನೂ ದಾನ ಮಾಡ್ತೀನಿ ಅಂತಾ ಚಿತ್ತೂರು ಡಿಸಿ ಕೀರ್ತಿ ಬಳಿ ಹೋಗಿದ್ದಾನೆ. ತನ್ನ ಬಳಿ ಬಂದ ಯುವಕನಿಗೆ ಉತ್ತಮ ದಾರಿಯಲ್ಲಿ ಬದುಕು ಅಂತಾ ಹೇಳಿ ಡಿಸಿ ಹೇಳಿ ಕಳಿಸಿದ್ದಾರೆ.

ಆರನೇ ತರಗತಿ ಓದಿರೋ ಬಾವಾಜಿ 12ನೇ ವರ್ಷಕ್ಕೆ ಜೂಜಾಟ ಆಡೋದನ್ನು ಆರಂಭಿಸಿದ್ದನಂತೆ. ಈತ ಕೈನಲ್ಲಿ ಮುಟ್ಟಿದ ಕೂಡ್ಲೇ ಇಂಥದ್ದೇ ಕಾರ್ಡ್ ಅಂತಾ ಹೇಳ್ತಾನೆ. ಈತನ ಇಸ್ಫೀಟ್​ ಜೀನಿಯಸ್​ಗೆ ಸ್ಥಳೀಯರೆಲ್ಲಾ ಬೆಚ್ಚಿ ಹೋಗಿದ್ದಾರೆ.

Comments are closed.