ರಾಷ್ಟ್ರೀಯ

ಪದೇ ಪದೆ ಮುಷ್ಕರಕ್ಕೆ ಕರೆ ನೀಡಿ ತೊಂದರೆ ಕೊಡದಂತೆ ಬ್ಯಾಂಕ್ ನೌಕರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

Pinterest LinkedIn Tumblr

ನವದೆಹಲಿ : ಬ್ಯಾಂಕ್ ನೌಕರರು ಪದೇ ಪದೆ ಮುಷ್ಕರಕ್ಕೆ ಕರೆ ನೀಡಿ ತೊಂದರೆ ಕೊಡದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ಹೇಳಿದೆ ಎನ್ನಲಾಗಿದೆ. ಬ್ಯಾಂಕ್​ ಒಕ್ಕೂಟಗಳ ನೌಕರರು ಒಂದು ದಿನದ ಮುಷ್ಕರಕ್ಕೆ ಕುಳಿತಿದ್ದರಿಂದ ಭಾರತದಾದ್ಯಂತ ಬ್ಯಾಂಕಿಂಗ್​ ವ್ಯವಸ್ಥೆ ಕಾರ್ಯಾಚರಣೆಗಳ ಮೇಲೆ ಭಾಗಶಃ ಹೊಡೆತ ಬಿದಿತ್ತು, ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ ಮುಷ್ಕರಕ್ಕೆ ಕನಿಷ್ಠ 14 ದಿನಗಳ ಮೊದಲು ಬ್ಯಾಂಕ್​ಗಳು ನೋಟಿಸ್ ನೀಡಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯವನ್ನು ಉಲ್ಲೇಖಿಸಿದ ವರದಿಯನ್ನು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಸಾರ್ವಜನಿಕ ವಲಯದ 10 ಬ್ಯಾಂಕ್​ಗಳನ್ನು ನಾಲ್ಕು ದೊಡ್ಡ ಬ್ಯಾಂಕ್​ಗಳಾಗಿ ವಿಲೀನಗೊಳಿಸುವ ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಹಾಗೂ ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್‌ಐ) ಪ್ರತಿಭಟನೆಗೆ ಕರೆ ನೀಡಿದ್ದವು. ಇದರಿಂದ . ಬ್ಯಾಂಕಿಂಗ್ ಸೇವೆಗಳಾದ ನಗದು ಹಿಂಪಡೆಯುವಿಕೆ, ಠೇವಣಿ ಇರಿಸುವಿಕೆ, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಇತರ ಸೇವೆಗಳಲ್ಲಿ ದೇಶಾದ್ಯಂತ ವ್ಯತ್ಯಯ ಉಂಟಾಗಿತ್ತು.

Comments are closed.