ನವದೆಹಲಿ: ಇಲ್ಲೊಬ್ಬ ಪುರುಷನೋರ್ವ ಧರ್ಮಪತ್ನಿಯ ಅನುಮತಿ ಪಡೆದು ಮತ್ತೊಬ್ಬಾಕೆ ಜತೆ ಲಿವ್ ಇನ್ ಸಂಬಂಧ ಇರಿಸಿಕೊಂಡ. ಆದರೆ, ಲಿವ್ ಇನ್ ಸಂಗಾತಿಗೆ ಅಕ್ರಮ ಸಂಬಂಧ ಇದೆ ಎಂಬ ಶಂಕೆಯಲ್ಲಿ ಆಕೆಯನ್ನು ಕೊಂದ!
ದಹೆಲಿಯ ಕನಾಟ್ ಪ್ಲೇಸ್ ನಿವಾಸಿ ರಾಮ್ ದಾಸ್ (42) ಕೊಂದವ. ಪಾಯಲ್ ಕೊಲೆಯಾದಾಕೆ. ರಾಮ್ ದಾಸ್ಗೆ ಮೊದಲೇ ಮದುವೆಯಾಗಿತ್ತು. ಆದರೆ ಪಾಯಲ್ ಪ್ರೇಮಪಾಶದಲ್ಲಿ ಆತ ಸಿಲುಕಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತ ಮೊದಲ ಪತ್ನಿಯ ಅನುಮತಿ ಪಡೆದು, ಪಾಯಲ್ ಜತೆ ಲಿವ್ ಇನ್ ಸಂಬಂಧ ಇರಿಸಿಕೊಂಡಿದ್ದ.
ಇತ್ತೀಚಿಗೆ ನಿವೇಶನ ಖರೀದಿಸುವ ವಿಷಯದಲ್ಲಿ ರಾಮ್ ದಾಸ್ ಮತ್ತು ಪಾಯಲ್ ನಡುವೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ಸಹೋದರಿ ಮನೆಗೆ ಹೋಗಿ ಕೆಲದಿನಗಳಿಂದ ಅಲ್ಲಿಯೇ ನೆಲೆಸಿದ್ದಳು. ಆದರೆ ರಾಮ್ ದಾಸ್ನನ್ನು ಭೇಟಿಯಾಗಲು ಶುಕ್ರವಾರ ಬಂದಿದ್ದಳು.
ಈ ವೇಳೆ ನಿವೇಶನ ಖರೀದಿ ವಿಷಯವಾಗಿ ಇಬ್ಬರ ನಡುವೆ ಮತ್ತೊಮ್ಮೆ ಜಗಳವಾಗಿದೆ. ಆಗ ಆಕೆಯ ಶೀಲ ಶಂಕಿಸಿ ರಾಮ್ ದಾಸ್ ಕೊಂಕು ಮಾತನಾಡಿದ್ದಾನೆ. ಬಳಿಕ ಕೈಗೆ ಸಿಕ್ಕ ಮರದ ತುಂಡು ಎತ್ತಿಕೊಂಡು ಪಾಯಲ್ನ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ಪಾಯಲ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.
ಆಕೆಯ ದೇಹವನ್ನು ಶೌಚಗೃಹದೊಳಗೆ ಇರಿಸಿ ಪರಾರಿಯಾಗಲು ರಾಮ್ ದಾಸ್ ಯತ್ನಿಸಿದ್ದ. ಆದರೆ, ಗಲಾಟೆಯ ಸದ್ದಿನಿಂದ ಎಚ್ಚೆತ್ತುಕೊಂಡಿದ್ದ ನೆರೆಹೊರೆಯವರು ರಾಮ್ ದಾಸ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
Comments are closed.