ನವದೆಹಲಿ (09): ಮಾಜಿ ರಾಷ್ಟ್ರಪತಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮ್ ನಾತ್ ಕೋವಿಂದ್ ಅವರು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ನಾನಾಜಿ ದೇಶ್ಮುಖ್ ಹಾಗೂ , ಭೂಪೇನ್ ಹಜಾರಿಕಾಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ಜನವರಿ ತಿಂಗಳಲ್ಲೇ ಕೇಂದ್ರ ಸರ್ಕಾರ ಘೋಷಿಸಿತ್ತು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತರತ್ನ ನೀಡಲಾಯಿತು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್, ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಚ್ಚರಿ ಎಂದರೆ ಗಾಂಧಿ ಕುಟುಂಬದ ಯಾರೊಬ್ಬರೂ ಪಾಲ್ಗೊಂಡಿರಲಿಲ್ಲ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.
ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದರು. ನಾನಾಜಿ ದೇಶ್ಮುಖ್ ಸಮಾಜ ಸುಧಾರಕರು. ದಶಕಗಳ ಕಾಲ ದೇಶಕ್ಕಾಗಿ ಶ್ರಮಿಸಿದ್ದವರು. ಭೂಪೇನ್ ಹಜಾರಿಕಾ ಪ್ರಸಿದ್ಧ ಗಾಯಕರಾಗಿದ್ದವರು. ಅವರ ಹಾಡುಗಳು ಇಂದಿಗೂ ಜನಜನಿತ.
ಸಿದ್ದಗಂಗಾ ಶ್ರೀಗಳ ಆರೋಗ್ಯ ಹದಗೆಟ್ಟ ದಿನದಿಂದಲೂ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ನ್ಯೂಸ್ 18 ಕನ್ನಡ ಕೂಡ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೋರಿ ಕ್ಯಾಂಪೇನ್ ಆರಂಭಿಸಿತ್ತು.
ಕ್ಯಾಂಪೇನ್ ಬೆನ್ನಲ್ಲೇ ಕೇಂದ್ರ ಸಚಿವ ಸದಾನಂದ ಗೌಡರನ್ನು ಭೇಟಿ ಮಾಡಿ ನ್ಯೂಸ್ 18 ತಂಡ ಮನವಿ ಪತ್ರವನ್ನು ಕೂಡ ನೀಡಿತ್ತು. ಇದು ಕೇವಲ ನ್ಯೂಸ್ 18 ಕನ್ನಡದ ಅಭಿಯಾನ ಮಾತ್ರ ಆಗಿರಲಿಲ್ಲ. ಲಕ್ಷಾಂತರ ಭಕ್ತರ ಆಶಯವೂ ಆಗಿತ್ತು. ಜತೆಗೆ ಶ್ರೀಗಳು ದಶಕಗಳಿಂದ ಮಾಡಿಕೊಂಡು ಬಂದ ನಿಸ್ವಾರ್ಥ ಸೇವೆಗೆ ದೇಶದ ಅತ್ಯುನ್ನತ ಪ್ರಶಸ್ತಿ ಸಿಗಬೇಕು ಎಂಬ ಆಶಯ ಎಲ್ಲರದಾಗಿತ್ತು. ಆದರೆ, ಅವರಿಗೆ ಭಾರತರತ್ನ ನೀಡಿರಲಿಲ್ಲ.
Comments are closed.