ರಾಷ್ಟ್ರೀಯ

ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ನಿವಾಸದಲ್ಲಿ ಈದ್ ಅದ್ಧೂರಿಯಾಗಿ ಆಚರಿಸಿದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ರವಿಶಂಕರ್

Pinterest LinkedIn Tumblr

ನವದೆಹಲಿ: ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್ ಸೇರಿದಂತೆ ಹಲವು ಕೇಂದ್ರ ಸಚಿವರು ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ನಿವಾಸದಲ್ಲಿ ಬುಧವಾರ ಈದ್ ಉಲ್ ಫಿತರ್ ಅನ್ನು ಅದ್ಧೂರಿಯಾಗಿ ಆಚರಿಸಿದರು.

ಈ ಈದ್ ಎಲ್ಲರಿಗೂ ಸಂತೋಷ, ಉತ್ಸಾಹ ತುಂಬಲಿ. ದೇಶದ ಎಲ್ಲ ಜನತೆಗೂ ಈದ್ ಉಲ್ ಫಿತರ್ ಶುಭಾಶಯಗಳ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇದೇ ವೇಳೆ, ಅಲ್ಪ ಸಂಖ್ಯಾತ ವಿದ್ಯಾರ್ಥಿನಿಯರಿಗೆ ನಾನು ಈದ್ ಗಿಫ್ಟ್ ವೊಂದನ್ನು ನೀಡುತ್ತಿದ್ದು, ಅವರು ಮುಂದಿನ ಐದು ವರ್ಷಗಳ ಕಾಲ 5 ಕೋಟಿ ರುಪಾಯಿ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ ಎಂದು ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಘೋಷಿಸಿದರು.

ಕೇಂದ್ರ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತೆ. ನಮ್ಮ ಸರ್ಕಾರ ನಮಗೆ ವೋಟ್ ಹಾಕದವರೂ ಸೇರಿದಂತೆ ಎಲ್ಲರ ಅಭಿವೃದ್ಧಿ ಬಯಸುತ್ತೆ ಎಂದು ನಖ್ವಿ ಹೇಳಿದ್ದಾರೆ.

Comments are closed.