ಕೋಲ್ಕತ್ತಾ: ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಭರ್ಜರಿ ಗೆಲುವು ಪಡೆದಿರುವುದನ್ನ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇನ್ನೂ ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಬಿಜೆಪಿಯ ಗೆಲುವನ್ನ ವಿರೋಧಿಸಿ ಕವಿತೆಯ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ದೀದಿ, ತಾನು ಬರೆದಿರುವ ಆ ಕವಿತೆಯನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕವಿತೆಯಲ್ಲಿ ಬಣ್ಣದ ಕೋಮುವಾದಿಯನ್ನ ನಾನು ಒಪ್ಪುವುದಿಲ್ಲ. ಪ್ರತಿ ಧರ್ಮದಲ್ಲಿ ಸಹಿಷ್ಣುತೆ, ಆಕ್ರಮಣಶೀಲತೆ ಇರುತ್ತದೆ. ಆದ್ರೆ, ಬಂಗಾಳದಲ್ಲಿ ಬೆಳೆದ ನಾನು ಶಾಂತವಾದ ಪುನರ್ಜೀವನದ ಸೇವಕಿಯಾಗಿದ್ದೇನೆ. ಧರ್ಮದ ಹೆಸರಲ್ಲಿ ಆಕ್ರಮಣಶೀಲತೆ ಮಾರುವುದನ್ನ ನಾನು ಒಪ್ಪುವುದಿಲ್ಲ ಎಂದು ಬರೆದಿದ್ದಾರೆ.
ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಜೈ ಶ್ರೀರಾಮ್ ಘೋಷಣೆ ಮತ್ತು ಹಿಂದೂ ಧರ್ಮದ ಆಚರಣೆ ಮಾಡಲು ಬಿಡುವುದಿಲ್ಲ ಎಂಬ ಆರೋಪವನ್ನು ನಮ್ಮ ವಿರುದ್ಧ ಬಿಜೆಪಿ ಮಾಡಿತ್ತು. ಹೀಗಾಗಿ ನಾವು ಹೆಚ್ಚಿನ ಕ್ಷೇತ್ರಗಳಲ್ಲಿ ಸೋಲಬೇಕಾಯಿತು ಎಂಬುದನ್ನ ಕವಿತೆಯ ಮೂಲಕ ಮಮತಾ ಬ್ಯಾನರ್ಜಿ ಹೇಳೋಕೆ ಪ್ರಯತ್ನಿಸಿದ್ದಾರೆ.
Comments are closed.