ರಾಷ್ಟ್ರೀಯ

ಕವಿತೆಯ ಮೂಲಕ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಅಸಮಾಧಾನ!

Pinterest LinkedIn Tumblr


ಕೋಲ್ಕತ್ತಾ: ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಭರ್ಜರಿ ಗೆಲುವು ಪಡೆದಿರುವುದನ್ನ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇನ್ನೂ ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಬಿಜೆಪಿಯ ಗೆಲುವನ್ನ ವಿರೋಧಿಸಿ ಕವಿತೆಯ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ದೀದಿ, ತಾನು ಬರೆದಿರುವ ಆ ಕವಿತೆಯನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಕವಿತೆಯಲ್ಲಿ ಬಣ್ಣದ ಕೋಮುವಾದಿಯನ್ನ ನಾನು ಒಪ್ಪುವುದಿಲ್ಲ. ಪ್ರತಿ ಧರ್ಮದಲ್ಲಿ ಸಹಿಷ್ಣುತೆ, ಆಕ್ರಮಣಶೀಲತೆ ಇರುತ್ತದೆ. ಆದ್ರೆ, ಬಂಗಾಳದಲ್ಲಿ ಬೆಳೆದ ನಾನು ಶಾಂತವಾದ ಪುನರ್​ಜೀವನದ ಸೇವಕಿಯಾಗಿದ್ದೇನೆ. ಧರ್ಮದ ಹೆಸರಲ್ಲಿ ಆಕ್ರಮಣಶೀಲತೆ ಮಾರುವುದನ್ನ ನಾನು ಒಪ್ಪುವುದಿಲ್ಲ ಎಂದು ಬರೆದಿದ್ದಾರೆ.

ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಜೈ ಶ್ರೀರಾಮ್​ ಘೋಷಣೆ ಮತ್ತು ಹಿಂದೂ ಧರ್ಮದ ಆಚರಣೆ ಮಾಡಲು ಬಿಡುವುದಿಲ್ಲ ಎಂಬ ಆರೋಪವನ್ನು ನಮ್ಮ ವಿರುದ್ಧ ಬಿಜೆಪಿ ಮಾಡಿತ್ತು. ಹೀಗಾಗಿ ನಾವು ಹೆಚ್ಚಿನ ಕ್ಷೇತ್ರಗಳಲ್ಲಿ ಸೋಲಬೇಕಾಯಿತು ಎಂಬುದನ್ನ ಕವಿತೆಯ ಮೂಲಕ ಮಮತಾ ಬ್ಯಾನರ್ಜಿ ಹೇಳೋಕೆ ಪ್ರಯತ್ನಿಸಿದ್ದಾರೆ.

Comments are closed.