ಕರ್ನಾಟಕ

ರಾಜ್ಯದಿಂದ ಮೋದಿ ಸಚಿವ ಸಂಪುಟ ಸೇರಲಿರುವವರು ಯಾರು ಗೊತ್ತಾ?

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಬಂದಿದ್ದು ಆಯ್ತು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು ಆಯ್ತು, ಈಗ ರಾಜ್ಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವುದು ಯಾರಾಗ್ತಾರೆ ಕೇಂದ್ರದ ಮಂತ್ರಿಗಳು ಎಂಬುದು.

ಕಳೆದ ಬಾರೀ ಕೇಂದ್ರ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆದವರಿಗೆ ಈ ಸಲ ಮಂತ್ರಿ ಸ್ಥಾನ ಸಿಗುತ್ತಾ ಅಥವಾ ಹೊಸಬರಿಗೆ ಮೋದಿ ಅವಕಾಶ ಕೊಡಲಿದ್ದಾರಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಸಮುದಾಯದ ಆಧಾರದ ಮೇಲೆ ಸಚಿವ ಸ್ಥಾನ ಸಿಗಲಿದ್ಯಾ ಅಥವಾ ಅನುಭವನ್ನು ಪರಿಗಣಿಸಿ ಮಂತ್ರಿಸ್ಥಾನ ನೀಡಲಿದ್ದಾರಾ(?) ಎಂಬುದನ್ನು ಅಂದಾಜಿಸಲಾಗುತ್ತಿದೆ. ಬ್ರಾಹ್ಮಣ ಕೋಟಾದಲ್ಲಿ ಈ ಬಾರಿ ಧಾರವಾಡ ಕ್ಷೇತ್ರ ಬಿಜೆಪಿ ವಿಜೇತ ಅಭ್ಯರ್ಥಿ ಪ್ರಹ್ಲಾದ್ ಜೋಷಿಗೆ ಒಲಿಯಲಿದೆಯಾ ಅದೃಷ್ಟ(?) ಕಳೆದ ಸಲ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದ ದಿವಗಂತ ಅನಂತ್ ಕುಮಾರ್ ಸ್ಥಾನ ತುಂಬೋರ್ಯಾರು(?) ಮೈಸೂರು-ಕೊಡಗು ಕ್ಷೇತ್ರದಿಂದ ಎರಡು ಬಾರಿ ಗೆಲುವು ಪಡೆದಿರುವ ಯುವ ಸಂಸದ ಪ್ರತಾಪ್ ಸಿಂಹಗೂ ಒಲಿಯಲಿದೆಯಾ ಅದೃಷ್ಟ(?) ಎಂಬು ಕುತೂಹಲ ಮತ್ತು ಚರ್ಚೆ ನಡೆಯುತ್ತಿದೆ.

ಮೈಸೂರು ಸಂಸದ ಪ್ರತಾಪ್ ಸಿಂಹ ಪರ ಕೆಲವು ಆರ್​​ಎಸ್​ಎಸ್ ನಾಯಕರ ಲಾಬಿ ಮಾಡುದ್ದಾರೆ ಎನ್ನಲಾಗಿದೆ. ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಸೋಲಿಸಿದ ಡಾ. ಉಮೇಶ್ ಜಾಧವ್ ಕೇಂದ್ರ ಮಂತ್ರಿ ಆಗ್ತಾರಾ(?) ದೇವೆಗೌಡರ ವಿರುದ್ದ ಜಯ ಸಾಧಿಸಿದ ಜಿ.ಎಸ್ ಬಸವರಾಜು ಹೆಸರು ಕೂಡಾ ಮುನ್ನಾಲೆಗೆ ಬಂದಿದೆ.

ಇನ್ನೊಂದು ಕಡೆ ಬಿಎಸ್ ಯೂಡಿಯೂರಪ್ಪ ಅವರ ಆಪ್ತ ವಲಯದವರಾದ ಚಿಕ್ಕಮಗಳೂರು-ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿ ವಿಜೇತ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಂತ್ರಿ ಸ್ಥಾನ ಕೊಡಿಸಲು ಚಿಂತನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಇನ್ನೊಂದು ಕಡೆ ರಮೇಶ್ ಜಿಗಜಿಣಗಿ ಬದಲು ಶ್ರೀನಿವಾಸ್ ಪ್ರಸಾದ್​ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಮಾತುಕೇಳಿ ಬರುತ್ತಿವೆ.

ಅಲ್ಲದೇ ಕಳೆದ ಸಲ ಮಂತ್ರಿಯಾಗಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ವಿಜೇತ ಅಭ್ಯರ್ಥಿ ಡಿ.ವಿ ಸದಾನಂದಗೌಡರಿಗೆ ಹಾಗೂ ವಿವಾದಿತ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ವಿಜೇತ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆಗೆ ಮೋದಿ ಸಂಪುಟದಲ್ಲಿ ಮಂತ್ರಿ ಸ್ಥಾನ ಈ ಬಾರಿ ಕೋಕ್ ನೀಡುವ ಸಾಧ್ಯತೆಯಿದೆ ಎಂದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

Comments are closed.