ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಭದ್ರತಾ ಪಡೆಗಳು ಮೂವರು ಉಗ್ರಗಾಮಿಗಳನ್ನು ಹತ್ಯೆಗೈದಿದ್ದಾರೆ. ಕಳೆದ ವರ್ಷ ಕಾಶ್ಮೀರದ ಭಾರತೀಯ ಸೈನಿಕ ಔರಂಗಜೇಬ್ ಅವರನ್ನು ಕೊಂದುಹಾಕಿದ್ದ ಉಗ್ರರಲ್ಲಿ ಒಬ್ಬಾತ ಇವತ್ತಿನ ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದಾನೆ. ಆವಂತಿಪೋರಾದ ಪಣಜಗಮ್ ಪ್ರದೇಶದಲ್ಲಿ ಉಗ್ರರು ಇರುವ ಸುಳಿವು ಬೆನ್ನತ್ತಿ ಇವತ್ತು ಸೇನೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಗುಂಡಿನ ಕಾಳಗ ನಡೆದಿದೆ. ಈ ವೇಳೆ, ಓರ್ವ ಹಿಜ್ಬುಲ್ ಕಮಾಂಡರ್ ಸೇರಿ ಮೂವರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ಧಾರೆ. ಆದರೆ, ಭದ್ರತಾ ಪಡೆ ಯೋಧರಿಗೆ ಯಾವುದೇ ಹಾನಿಯಾದ ಮಾಹಿತಿ ಬಂದಿಲ್ಲ.
ಉಗ್ರು ಇದ್ದ ಸ್ಥಳದಲ್ಲಿ ಸಾಕಷ್ಟು ಶಸ್ತ್ರಾಸ್ತ್ರ ಉಗ್ರಾಣ ಪತ್ತೆಯಾಗಿದೆ. ಹಲವು ಆಯುಧಗಳನ್ನು ಯೋಧರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ವೈದ್ಯನಿಂದ 180 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ; ದಶಕಗಳ ನಂತರ ವಿಚಾರ ಬೆಳಕಿಗೆ
ಎರಡು ದಿನಗಳ ಹಿಂದೆ ಇದೇ ಪುಲ್ವಾಮ ಜಿಲ್ಲೆಯ ದಾಲಿಪುರ ಎಂಬಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿ ಘಟನೆಯಲ್ಲಿ 9 ಜನರು ಬಲಿಯಾಗಿದ್ದರು. ಇದರಲ್ಲಿ ಐವರು ಉಗ್ರರು, ಇಬ್ಬರು ಸೈನಿಕರು ಮತ್ತು ಇಬ್ಬರು ನಾಗರಿಕರೂ ಒಳಗೊಂಡಿದ್ದರು.
Comments are closed.