ರಾಷ್ಟ್ರೀಯ

ಐಎಸ್ಐಎಸ್​ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿ ಕೇರಳದಲ್ಲಿ ಬಂಧನ

Pinterest LinkedIn Tumblr


ಕೊಚ್ಚಿ: ಶ್ರೀಲಂಕಾದಲ್ಲಿ ಐಎಸ್ಐಎಸ್​ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟದಿಂದ ಎಚ್ಚೆತ್ತುಕೊಂಡಿರುವ ಭಾರತ ಹಲವೆಡೆ ಕಟ್ಟೆಚ್ಚರ ವಹಿಸಿದೆ. ಇನ್ನು ರಾಷ್ಟ್ರೀಯ ತನಿಖಾ ದಳ ಸೋಮವಾರ ಐಎಸ್​ಐಎಸ್​​​ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಓರ್ವ ವ್ಯಕ್ತಿಯನ್ನ ಬಂಧಿಸಿದೆ. 29 ವರ್ಷದ ರಿಯಾಸ್​ ಅಬೂಬಕರ್​ ಎಂಬಾತನನ್ನ ಕೇರಳದ ಕಾಸರಗೋಡು ಬಳಿಯ ಪಲಕ್ಕಾಡ್​ನಲ್ಲಿ ಬಂಧಿಸಿದ್ದು, ಈತ ಕೇರಳದಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎನ್ನಲಾಗಿದೆ.

ಇಂದು ಅಬೂಬಕರ್​​​ ಅಲಿಯಾಸ್​ ಅಬುದುಜಾನ್​ನನ್ನ ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. ಇನ್ನು ತನಿಖೆ ವೇಳೆ ಹಲವು ಆತಂಕಕಾರಿ ಅಂಶ ಬಾಯ್ಬಿಟ್ಟಿರುವ ಆರೋಪಿ ಬಳಿಯಿಂದ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆಯಂತೆ. ಶ್ರೀಲಂಕಾ ದಾಳಿಯ ರುವಾರಿಯಾಗಿದ್ದ ನ್ಯಾಷನಲ್​ ತೌಹೀದ್​ ಜಮಾತ್​​ ಸಂಘಟನೆಯ ನಾಯಕ ಝಾಕಿರ್​ ನಾಯ್ಕ್​ ಅಲಿಯಾಸ್​ ಝಹ್ರಾನ್​ ಹಷಿಮ್​ ನೀಡುತ್ತಿದ್ದ ಆದೇಶ ಹಾಗೂ ಅವರ ವಿಡಿಯೋಗಳನ್ನ ನಾನು ಫಾಲೋ ಮಾಡ್ತಿದ್ದೆ ಅಂತ ತನಿಖೆ ವೇಳೆ ಬಾಯಿಬಿಟ್ಟಿದ್ದಾನಂತೆ. ಇಸ್ಲಾಮಿಕ್​ ರಿಸರ್ಚ್ ಫೌಡೇಷನ್​ನ ನಿರ್ಮಾತೃ ಝಾಕಿರ್​ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ.

ರಾಷ್ಟ್ರೀಯ ತನಿಖಾ ದಳ ಭಾನುವಾರ ಕೇರಳದ ಕಾಸರಗೋಡಿನ ಎರಡು ಹಾಗೂ ಪಲಕ್ಕಾಡ್​ನ ಒಂದು ಕಡೆ 2016ರಲ್ಲಿ ಐಎಸ್​ಐಎಸ್​​​ ಸಂಘಟನೆ ಜೊತೆ ಸಂಪರ್ಕ ಹೊಂದಿದವರ ಮನೆಯ ಮೇಲೆ ದಾಳಿ ನಡೆಸಿದೆ. ಇನ್ನು ಎನ್​ಐಎ ವಶದಲ್ಲಿರುವ ರಿಯಾಸ್​ ಹಲವು ವರ್ಷಗಳಿಂದ ತಲೆಮರೆಸಿಕೊಂಡಿರುವ ಅಬ್ದುಲ್​ ರಷಿದ್​ ಅಬ್ದಲ್ಲಾನೊಂದಿಗೆ ಸಂಪರ್ಕದಲ್ಲಿದ್ದೆ ಅಂತ ಒಪ್ಪಕೊಂಡಿದ್ದಾನೆ. ಅಲ್ಲದೆ ಆತನ ಆಡಿಯೋ ಕ್ಲಿಪ್​ ಹಾಗೂ ವಿಡಿಯೋ ತುಣುಕುಗಳನ್ನ ನೋಡುತ್ತಿದ್ದೆ ಎಂದಿದ್ದಾನೆ. ಇನ್ನು ಭಾರತದಲ್ಲಿ ದಾಳಿ ನಡೆಸಲು ಪ್ರೇರೇಪಿಸುವಂತಹ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

Comments are closed.