ರಾಷ್ಟ್ರೀಯ

ದೇಶಕ್ಕೆ ಕಾವಲುಗಾರರು ಬೇಕೆ ಹೊರತು ರಾಜ, ಮಹಾರಾಜರಲ್ಲ: ಮೋದಿ

Pinterest LinkedIn Tumblr


ನವದೆಹಲಿ: ದೇಶಕ್ಕೆ ಚೌಕಿದಾರರು ಬೇಕೇ ಹೊರತು ರಾಜ ಮಹಾರಾಜರಲ್ಲ. ಚೌಕಿದಾರ ಮಾತ್ರ ದೇಶಕ್ಕೆ ಸೇವೆ ಮಾಡಬಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ‘ಮೇ ಭೀ ಚೌಕಿದಾರ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 2014 ರಲ್ಲಿ ದೇಶದ ಜನತೆ ನನ್ನ ಮೇಲೆ ನಂಬಿಕೆಯನ್ನು ಸೇವೆ ಮಾಡಲು ಅವಕಾಶವನ್ನು ನೀಡಿದರು. ನನಗೆ ಕೊಟ್ಟ ಅವಕಾಶವನ್ನು ನಾನು ಹಾಳು ಮಾಡಲಿಲ್ಲ. ಭ್ರಷ್ಟರಿಂದ ದೇಶದ ಸಂಪತ್ತನ್ನು ರಕ್ಷಿಸಲು ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ ಎಂದು ಹೇಳಿದರು.

ಮೋದಿ ಪ್ರಮುಖ ಹೇಳಿಕೆಗಳು:
ದೇಶದ ಪ್ರತಿಯೊಬ್ಬ ನಾಗರಿಕನೂ ಚೌಕೀದಾರರು. ಚೌಕೀದಾರ ಎನ್ನುವುದು ಒಂದು ಭಾವನೆ. ಆದರೆ ಕೆಲವರು ಬೌದ್ಧಿಕವಾಗಿ ಬೆಳವಣಿಗೆ ಆಗಿರದ ವ್ಯಕ್ತಿಗಳು ಚೌಕೀದಾರ ಎಂದರೆ ಟೋಪಿ ಹಾಕಿಕೊಂಡು ಕೋಲು ಹಿಡಿದು, ಸಿಳ್ಳೆ ಹಾಕಿಕೊಂಡು ಬರುವವರು ಎಂದು ತಿಳಿದುಕೊಂಡಿದ್ದಾರೆ.

ಕಾಂಗ್ರೆಸ್ ಒಂದೊಂದು ಸಮಯದಲ್ಲಿ ಸುಳ್ಳು ಹೇಳಿಕೊಂಡು ಚುನಾವಣೆಗೆ ಹೋಗುತ್ತದೆ. ದೆಹಲಿ ಚುನಾವಣೆಯ ಸಮಯದಲ್ಲಿ ಅವರ ವಸ್ತು ‘ಅಸಹಿಷ್ಣುತೆ’ ಆಗಿತ್ತು. ಬಿಹಾರ ಚುನಾವಣೆಯ ಸಮಯದಲ್ಲಿ ‘ಎಲ್ಲ ಮೀಸಲಾತಿಯನ್ನು ಮೋದಿ ಸರ್ಕಾರ ತೆಗೆದು ಹಾಕುತ್ತದೆ’ ಆಗಿತ್ತು. ಇದರ ಜೊತೆ ‘ಅವಾರ್ಡ್ ವಾಪ್ಸಿ’ ಬಂದು ಹೋಯ್ತು.

ಉಗ್ರರ ಕೇಂದ್ರ ಬಿಂದು ಎಲ್ಲಿದೆ ಎನ್ನುವುದು ಇಡಿ ವಿಶ್ವಕ್ಕೆ ಗೊತ್ತಿದೆ. ಈ ಕಾಣರಕ್ಕಾಗಿಯೇ ನಾವು ಅವರ ನೆಲಕ್ಕೆ ನುಗ್ಗಿ ದಾಳಿ ಮಾಡಿ ನೆಲೆಗಳನ್ನು ಧ್ವಂಸ ಮಾಡಿದ್ದೇವೆ. ಚುನಾವಣೆ ಇದೆ ಎನ್ನುವ ಕಾರಣಕ್ಕೆ ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಿಲ್ಲ. ನಮ್ಮ ದೇಶದ ಜನರು ಪಾಕಿಸ್ತಾನ ಹೇಳಿಕೆಯನ್ನು ಬೆಂಬಲಿಸುತ್ತಿರುವುದನ್ನು ನೋಡಿ ನನಗೆ ಬೇಸರವಾಗುತ್ತದೆ.

ಬಾಲಕೋಟ್ ಮೇಲೆ ಯಶಸ್ವಿಯಾಗಿ ದಾಳಿ ಮಾಡಿದ ನಮ್ಮ ವೀರ ಯೋಧರಿಗೆ ಭಾರತ ಸೆಲ್ಯೂಟ್ ಹೊಡೆಯುತ್ತದೆ. ನನಗೆ ನಮ್ಮ ಸೇನೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ಈ ಕಾರಣಕ್ಕಾಗಿಯೇ ನಾನು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ.

ಕಳೆದ ಐದು ವರ್ಷದಲ್ಲಿ ನಾವು ಏನು ಸಾಧನೆ ಮಾಡಿದ್ದೇವೋ ಅದು ಸಾಧ್ಯವಾಗಿದ್ದು ಜನರ ಭಾಗಿದಾರಿಯಿಂದ. ಜನರಿಂದಾಗಿ ಸಚ್ಛತೆ ಒಂದು ದೊಡ್ಡ ಅಭಿಯಾನವಾಗಿ ರೂಪುಗೊಂಡಿದೆ.

ನಾನು ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಲ್ಲ. ಭಾರತವನ್ನು ಲೂಟಿ ಹೊಡೆಯಲು ನಾನು ಬಿಡುವುದಿಲ್ಲ. ಮಿಶನ್ ಶಕ್ತಿಯ ಮೂಲಕ ನಾವು ಈಗ ಬಾಹ್ಯಾಕಾಶದಲ್ಲಿ ಎತ್ತರಕ್ಕೆ ತಲುಪಿದ್ದೇವೆ. ಇಲ್ಲಿಯವರೆಗೆ ಕೇವಲ ಮೂರು ದೇಶಗಳು ಮಾತ್ರ ಈ ಸಾಮರ್ಥ್ಯವನ್ನು ಹೊಂದಿದ್ದವು. ವಿಜ್ಞಾನಿಗಳಿಂದಾಗಿ ಈಗ ನಾವು ಬಾಹ್ಯಾಕಾಶ ಶಕ್ತಿ ರಾಷ್ಟ್ರಗಳ ಸಾಲಿಗೆ ಸೇರಿದ್ದೇವೆ.

ಕಳೆದ 4 ವರ್ಷಗಳಿಂದ ಒಂದು ಕುಟುಂಬ ಅದೇ ಭರವಸೆಯನ್ನು ನೀಡುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ಆ ಭರವಸೆ ಈಡೇರಿಲ್ಲ. ಈಗಲೂ ಆ ಭರವಸೆ ನೀಡುತ್ತಿದ್ದು, ಜನರ ಈ ವಿಚಾರವನ್ನು ಚುನಾವಣಾ ಸಮಯದಲ್ಲಿ ಗಂಭೀರವಾಗಿ ಪರಿಗಣಿಸಬೇಕು.

Comments are closed.