ನವದೆಹಲಿ: ಉತ್ತರಪ್ರದೇಶದಲ್ಲಿ ತಮ್ಮ ಪಕ್ಷದ ಕಾರ್ತಕರ್ತರ ಎದುರೇ ಬಿಜೆಪಿ ನಾಯಕರು ಬಡಿದಾಡಿಕೊಂಡಿದ್ದಾರೆ. ಸಂತ ಕಬೀರ್ ನಗರದ ರಸ್ತೆಯೊಂದರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಮಫಲಕದಲ್ಲಿ ತನ್ನ ಹೆಸರು ಹಾಕಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸಂಸದ ಶರದ್ ತ್ರಿಪಾಠಿ ಬಿಜೆಪಿ ಶಾಸಕ ರಾಕೇಶ್ ಭಾಘೇಲ್ ಎಂಬುವರ ಮೇಲೆ ಹಲ್ಲೆ ನಡೆಸಿದ್ಧಾರೆ. ಇಬ್ಬರ ಮಾತಿನ ಚಕಾಮಕಿ ನಡೆದಿದ್ದು, ಶರದ್ ತ್ರಿಪಾಠಿ ದಿಢೀರ್ ತನ್ನ ಕಾಲಿಗೆ ಹಾಕಿದ್ದ ಬೂಟು ತೆಗೆದು ಹಿಗ್ಗಾಮುಗ್ಗಾ ಹೊಡೆದಿದ್ದಾರೆ.
ಪಕ್ಷದ ಮುಖಂಡರ ಎದುರೇ ಇಬ್ಬರು ಬಿಜೆಪಿ ನಾಯಕರು ಕೈಕೈ ಮಿಲಾಯಿಸಿದ್ಧಾರೆ. ಮೊದಲಿಗೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಸಂಸದ ಶರದ್ ತ್ರಿಪಾಠಿ, ರಾಕೇಶ್ ಭಾಘೇಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಲಿನಲ್ಲಿದ್ದ ಬೂಟು ಹೊರ ತೆಗೆದು ಹಿಗ್ಗಾಮುಗ್ಗಾ ಬಾರಿಸಿದ್ಧಾರೆ. ಇದರಿಂದ ಆಕ್ರೋಶಗೊಂಡ ರಾಕೇಶ್ ಕೂಡ ಸಂಸದ ತ್ರಿಪಾಠಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇನ್ನು ಅಲ್ಲಿಯೇ ಸಭೆಯಲ್ಲಿದ್ದ ಸ್ಥಳೀಯ ಬಿಜೆಪಿ ನಾಯಕರು ಇಬ್ಬರು ನಾಯಕರನ್ನು ಬಿಡಿಸಲು ಮುಂದಾಗಿದ್ಧಾರೆ. ಮಧ್ಯಪ್ರವೇಶಿಸಿದ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಬಿಜೆಪಿ ಶಾಸಕರನ್ನು ತಡೆದು ಗಲಾಟೆ ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ನಾಯಕರು ಇಬ್ಬರು ಪರಸ್ಪರ ಬಡಿದಾಡಿಕೊಂಡ ವಿಡಿಯೋ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ. ಇದೀಗ ಕಿತ್ತಾಟದ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ನಾಯಕರು ಸಾರ್ವಜನಿಕವಾಗಿ ಅಪಹಾಸ್ಯಕ್ಕೀಡಾಗಿದ್ದಾರೆ.
Comments are closed.