ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಯಾಗಿ ಇಂದು ಬಿಹಾರದ ಪಾಟ್ನಾದಲ್ಲಿ ನಡೆಸಿದ ಸಂಕಲ್ಪ ರ್ಯಾಲಿ ಬಗ್ಗೆ ಮಾಜಿ ಮುಖ್ಯಮಂತ್ರಿ ಲಾಲು ಲೇವಡಿ ಮಾಡಿದ್ದಾರೆ. ಅಲ್ಲಿ ನಡೆದಿರುವ ಭವ್ಯ ಸಮಾವೇಶ ಒಂದು ಭ್ರಮೆ ಅಷ್ಟೇ ಎಂದು ಜರಿದಿದ್ದಾರೆ.
ನರೇಂದ್ರ ಮೋದಿ ಮತ್ತು ಪಾಸ್ವಾನ್ ಕೆಲವು ತಿಂಗಳಿನಿಂದ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಮೂಲವನ್ನು ಬಳಸಿಕೊಂಡು ಗಾಂಧಿ ಮೈದಾನದಲ್ಲಿ ಬೃಹತ್ ರ್ಯಾಲಿ ಆಯೋಜಿಸಿದ್ದಾರೆ. ಅವರು ರ್ಯಲಿಯಲ್ಲಿ ಸೇರಿಸಿರುವ ಜನರನ್ನು ನಾನು ರಸ್ತೆ ಬದಿಯ ಬೀಡಾ ಅಂಗಡಿ ಮುಂದೆ ಸೆಳೆಯಬಲ್ಲೆ ಎಂದು ಲಾಲು ಪ್ರಸಾದ್ ಯಾದವ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಇದೇ ಮೈದಾನದಲ್ಲಿ ಕಾಂಗ್ರೆಸ್ ಜನ ಆಕಾಂಕ್ಷ ಸಮಾವೇಶ ನಡೆಸಿದ ಸರಿಯಾಗಿ ಒಂದು ತಿಂಗಳಿಗೆ ಬಿಜೆಪಿ ಮೆಗಾ ರ್ಯಾಲಿ ಆಯೋಜಿಸಿದೆ. ಈ ಸಾರ್ವಜನಿಕ ಸಮಾವೇಶ ತುಂಬಾ ಮಹತ್ವದ್ದಾಗಿದೆ. ಏಕೆಂದರೆ, 2010ರ ನಂತರ ಮೋದಿ ಮತ್ತು ನಿತೀಶ್ ಕುಮಾರ್ ಒಂದೇ ಹಂಚಿಕೆ ಹಂಚಿಕೊಂಡಿದ್ದು ಇದೇ ಮೊದಲು.
ಕಾರ್ಯಕ್ರಮದ ಆಯೋಜಕರು ಬಹಳ ಚತುರ ಕ್ಯಾಮರಾಗಳನ್ನು ಬಳಸಿದ್ದಾರೆ. ಹೆಚ್ಚಿನ ಜನರು ಸೇರಿದ್ದಾರೆ ಎಂದು ಬಿಂಬಿಸಲು ಜೂಮ್ ಮಾಡಿ ತೋರಿಸುತ್ತಿದ್ದಾರೆ. ನಾಯಕರೇ ಜನರನ್ನು ವಂಚಿಸಬೇಡಿ, ಜೂಮ್ ಮಾಡಿದ ದೃಶ್ಯಾವಳಿಗಳನ್ನು ಬಿಟ್ಟು, ವಾಸ್ತವ ದೃಶ್ಯಾವಳಿಗಳನ್ನು ನೀಡಿ ಎಂದು ಲಾಲು ಸವಾಲು ಹಾಕಿದ್ದಾರೆ.
Comments are closed.