ರಾಷ್ಟ್ರೀಯ

ಗಣರಾಜ್ಯೋತ್ಸವ: ಜಿಲ್ಲಾಧಿಕಾರಿಗೆ ಭಾಷಣ ಓದಲು ಹೇಳಿದ ಮಧ್ಯಪ್ರದೇಶ ಸಚಿವೆ ಇಮಾರ್ತಿ ದೇವಿ

Pinterest LinkedIn Tumblr


ಗ್ವಾಲಿಯರ್​: ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಇಮಾರ್ತಿ ದೇವಿ ಗಣರಾಜ್ಯೋತ್ಸವ ಭಾಷಣ ಓದಲಾಗದೆ ಜಿಲ್ಲಾಧಿಕಾರಿಗೆ ಓದಲು ಹೇಳಿದ್ದಾರೆ. ಜಿಲ್ಲಾಧಿಕಾರಿ ಭರತ್​ ಯಾದವ್​ ಗಣರಾಜ್ಯೋತ್ಸವ ಭಾಷಣವನ್ನು ಓದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ.

ಈ ವಿಡಿಯೋದಲ್ಲಿ, ಸಚಿವೆ ಇಮಾರ್ತಿ ದೇವಿ ಮೊದಲು ಭಾಷಣದ ಕೆಲವು ಸಾಲುಗಳನ್ನು ಓದಿದ್ದಾರೆ. ನಂತರ ನಿಲ್ಲಿಸಿದ ಅವರು, ಜಿಲ್ಲಾಧಿಕಾರಿ ಓದುತ್ತಾರೆ ಎಂದು ಅವರಿಗೆ ಭಾಷಣದ ಪ್ರತಿಯನ್ನು ನೀಡಿದ್ದಾರೆ. ಈ ವಿಡಿಯೋವನ್ನು ಎಎನ್​ಐ ಶೇರ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್​ ಆಗುತ್ತಿದೆ. ಗ್ವಾಲಿಯರ್​ನ ಎಸ್​ಎಎಫ್​ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಂತರ ಪ್ರತಿಕ್ರಿಯೆ ನೀಡಿರುವ ಇಮಾರ್ತಿ ದೇವಿ, ‘ನನಗೆ ಕಳೆದ ಎರಡು ದಿನಗಳಿಂದ ಆರೋಗ್ಯ ಸರಿಯಿಲ್ಲ. ಬೇಕಾದರೆ ನೀವು ವೈದ್ಯರನ್ನು ಕೇಳಿ. ಈಗ ಸ್ವಲ್ಪ ಪರವಾಗಿಲ್ಲ. ಹೀಗಾಗಿ ನಾನು ಜಿಲ್ಲಾಧಿಕಾರಿಗಳಿಗೆ ಭಾಷಣ ಓದಲು ಹೇಳಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ 28 ಹೊಸ ಖಾತೆಗಳನ್ನು ಹಂಚಿದ ಬಳಿಕ ಕಳೆದ ತಿಂಗಳು ಇಮಾರ್ತಿ ದೇವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Comments are closed.