ಅಹಮದಾಬಾದ್: ಶಾಲೆಗಳಲ್ಲಿ ಶಿಕ್ಷಕರು ಹಾಜರಾತಿ ಹಾಕಿದಾಗ ಮಕ್ಕಳು ‘ಎಸ್ ಸರ್’ ಎನ್ನುವುದು ರೂಢಿ. ದೇಶದೆಲ್ಲೆಡೆ ಇರುವ ಬಹುತೇಕ ಶಾಲೆಗಳಲ್ಲಿ ಇದೇ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ, ಗುಜರಾತ್ನಲ್ಲಿ ಇನ್ನುಮುಂದೆ ಆ ರೀತಿ ಹೇಳುವಂತಿಲ್ಲ. ಯಾಕೆ ಅಂತೀರಾ? ಹೇಳ್ತೀವಿ ಓದಿ…
ಗುಜರಾತ್ನ ಬಿಜೆಪಿ ಸರ್ಕಾರದ ದ್ವಿತೀಯ ದರ್ಜೆ ಮತ್ತು ಉನ್ನತ ಶಿಕ್ಷಣ ಮಂಡಳಿ ಹಾಗೂ ಕೇಂದ್ರದ ಪ್ರಾಥಮಿಕ ಶಿಕ್ಷಣ ಸಚಿವಾಲಯ ಹೊಸ ಆದೇಶವನ್ನು ಜಾರಿಗೊಳಿಸಿದ್ದು, ಅದರ ಅನ್ವಯ 1ರಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳು ಇನ್ನು ಮುಂದೆ ಹಾಜರಾತಿ ಹಾಕಿದಾಗ ಜೈ ಹಿಂದ್ ಅಥವಾ ಜೈ ಭಾರತ್ ಎಂದು ಹೇಳಬೇಕು.
ಸರ್ಕಾರಿ ಶಾಲಾ- ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ವ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದೆ. ಜನವರಿ 1ರಿಂದ ಅಂದರೆ ಇಂದಿನಿಂದಲೇ ಗುಜರಾತ್ನಲ್ಲಿ ಈ ನಿಯಮ ಜಾರಿಯಾಗಲಿದೆ. ಶಾಲಾ ದಿನಗಳಿಂದಲೇ ಮಕ್ಕಳಿಗೆ ಸಂಸ್ಕಾರ ಮತ್ತು ಧರ್ಮದ ಜಾಗೃತಿ ಮೂಡಿಸಬೇಕು ಎಂಬ ಕಾರಣದಿಂದ ಈ ನಿಯಮ ಜಾರಿಗೆ ತರಲಾಗಿದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಗುಜರಾತ್ ಶಿಕ್ಷಣ ಇಲಾಖೆ ಸಚಿವ ಭೂಪೇಂದ್ರ ಸಿನ್ಹಾ ಚುಡಾಸಮ ತಿಳಿಸಿದ್ದಾರೆ.
Comments are closed.