ರಾಷ್ಟ್ರೀಯ

ಗ್ರಾಮಸ್ಥರೆಲ್ಲರ ಸಾಲ ಮನ್ನಾ ಮಾಡಿದ ಚಹಾದಂಗಡಿ ಮಾಲೀಕ!

Pinterest LinkedIn Tumblr


ಚೆನ್ನೈ: ಚಹಾದಂಗಡಿ ಮಾಲೀಕನೊಬ್ಬ ತನ್ನ ಬಳಿ ಸಾಲ ಮಾಡಿಕೊಂಡಿದ್ದ ಗ್ರಾಮಸ್ಥರೆಲ್ಲರ ಸಾಲ ಮನ್ನಾ ಮಾಡಿ ಸುದ್ದಿಯಾಗಿದ್ದಾನೆ.

ಪಡುಕೊಟ್ಟಾಯ್‌ನ ವಂಬನ್ ಗ್ರಾಮದಲ್ಲಿರುವ ಶಿವಕುಮಾರ್ ಅಂಗಡಿಯಲ್ಲಿ ಟೀ ಕುಡಿಯಲು ಬರುತ್ತಿದ್ದ ಗ್ರಾಹಕರು ಸಾಲ ಮಾಡಿರುತ್ತಿದ್ದರು. ತಮ್ಮ ಬಳಿ ಹಣವಿದ್ದಾಗ ಆ ಸಾಲವನ್ನು ತೀರಿಸುತ್ತಿದ್ದರು. ಗಜ ಚಂಡಮಾರುತ ವಿಕೋಪದ ಬಳಿಕ ಗ್ರಾಮದ ರೈತರು ಮತ್ತು ಜನರು ತಮ್ಮ ಆಸ್ತಿಪಾಸ್ತಿಯನ್ನು ಕಳೆದುಕೊಂಡರು. ಇದು ಶಿವ ಕುಮಾರ್‌ಗೆ ಬಹಳ ನೋವನ್ನುಂಟು ಮಾಡಿದ್ದು , ಅವರಿಗಾಗಿ ತಾನು ಏನಾದರೂ ಮಾಡಬೇಕೆಂದುಕೊಂಡಿದ್ದ.

ತನ್ನಿಂದ ಏನು ಮಾಡಬಹುದು ಎಂದು ಯೋಚಿಸಿದ ಆತ ಕೊನೆಗೆ ತನ್ನ ಬಳಿ ಅವರು ಮಾಡಿದ್ದ ಸಾಲ ಮನ್ನಾ ಮಾಡಲು ನಿರ್ಧರಿಸಿದ. ಅದರಂತೆ ಅಂಗಡಿ ಹೊರಗೆ ಎಲ್ಲ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಬೋರ್ಡ್ ಹಾಕಿಸಿದ.

ಶಿವಕುಮಾರನ ಈ ಉದಾರತೆಗೆ ರಾಜ್ಯದ ಎಲ್ಲೆಡೆಗಳಿಂದ ಪ್ರಶಂಸೆ ಹರಿದುಬರುತ್ತಿದೆ.

Comments are closed.