ರಾಷ್ಟ್ರೀಯ

ತಾಜ್ ಮಹಲ್: ನಮಾಜ್ ತಡೆಯದಿದ್ದರೆ ಪೂಜೆಯ ಎಚ್ಚರಿಕೆ

Pinterest LinkedIn Tumblr


ಆಗ್ರಾ: ಭಾರತದ ಪುರಾತತ್ವ ಇಲಾಖೆ (ಎಎಸ್‌ಐ) ಆದೇಶ ಉಲ್ಲಂಘಿಸಿ ತಾಜ್ ಮಹಲ್ ಆವರಣದಲ್ಲಿ ನಮಾಜ್ ಮಾಡಿರುವ ಮುಸ್ಲಿಮರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ‘ನಾವು ಕೂಡ ತಾಜ್ ಒಳ ಹೊಕ್ಕು ಪೂಜೆ ಪುರಸ್ಕಾರ ನೆರವೇರಿಸಬೇಕಾಗುತ್ತದೆ’ ಎಂದು ಬಲಪಂಥೀಯ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ತಾಜ್ ಮಹಲ್ ಆವರಣದಲ್ಲಿ ಶುಕ್ರವಾರ ಹೊರತಪಡಿಸಿ ಉಳಿದ ದಿನ ನಮಾಜ್ ಮಾಡುವಂತಿಲ್ಲ ಎಂದು ಎಎಸ್‌ಐ ನೀಡಿದ ಆದೇಶವನ್ನು ಉಲ್ಲಂಘಿಸಿ, ಸ್ಥಳೀಯ ಮುಸ್ಲಿಮರು ಹಾಗೂ ತಾಜ್‌ಮಹಲ್ ಮಸೀದಿ ಇಂತೆಝಾಮಿಯಾ ಕಮಿಟಿಯ ಸದಸ್ಯರು ತಾಜ್ ಮಹಲ್‌ನಲ್ಲಿ ನಮಾಜ್ ಮಾಡಿದ್ದರು.

ತಾಜ್‌ಮಹಲ್ ಮೂಲತಃ ಶಿವ ಮಂದಿರವಾಗಿದ್ದು ತೇಜೋಮಹಾಲಯ ಎಂದು ಕರೆಯಲ್ಪಡುತ್ತಿತ್ತು ಎಂದಿರುವ ಬಲಪಥೀಯ ಸಂಘಟಕರು, ಆದೇಶಕ್ಕೆ ವಿರುದ್ಧವಾಗಿ ಸ್ಥಳೀಯ ಮುಸ್ಲಿಮರು ಅಲ್ಲಿ ನಮಾಜ್ ಮಾಡಿರುವುದನ್ನು ಖಂಡಿಸಿದ್ದಾರೆ.

ಎಎಸ್‌ಐ ಆದೇಶ ಉಲ್ಲಂಘಿಸಿ ಅಕ್ರಮವಾಗಿ ತಾಜ್‌ಮಹಲ್‌ನಲ್ಲಿ ನಮಾಜ್ ಮಾಡಿರುವ ಮುಸ್ಲಿಮರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ನಾವು ತೇಜೋಮಹಾಲಯದಲ್ಲಿ ಪೂಜೆ ನಡೆಸುತ್ತೇವೆ ಎಂದು ರಾಷ್ಟ್ರೀಯ ಬಜರಂಗ ದಳ ನಾಯಕ ಗೋವಿಂದ್ ಪರಶಾರ್ ಎಚ್ಚರಿಕೆ ನೀಡಿದ್ದಾರೆ.

‘2017ರಲ್ಲಿ ನಾನು ತೇಜೋಮಹಾಲಯದಲ್ಲಿ ಆರತಿ ಕಾರ್ಯಕ್ರಮ ನೆರವೇರಿಸಬೇಕೆಂದು ಕರೆ ಕೊಟ್ಟಿದ್ದೆ. ಆಗ ನನ್ನನ್ನು ಬಂಧಿಸಿ, 7 ದಿನಗಳ ಕಾಲ ಜೈಲಿನಲ್ಲಿಟ್ಟದ್ದರು. ಆದರೆ, ಈಗ ನಿಯಲಮ ಉಲ್ಲಂಘಿಸಿರುವ ಮುಸ್ಲಿಮರ ವಿರುದ್ಧವೇಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಗೋವಿಂದ್ ಪರಶಾರ್ ಪ್ರಶ್ನಿಸಿದ್ದಾರೆ.

ಮುಸ್ಲಿಂ ಸಮುದಾಯದವರು ಕಳೆದ 400 ವರ್ಷಗಳಿಂದ ತಾಜ್‌ಮಹಲ್ ಆವರಣದಲ್ಲೇ ನಮಾಜ್ ಮಾಡುತ್ತಿದ್ದಾರೆ. ಆದರೆ, 1948ರಲ್ಲಿ ತಾಜ್‌ಮಹಲ್ ನಿರ್ವಹಣೆ ಸಂಬಂಧ ಕಾನೂನು ಬಂದಿವೆ. ಬಲಪಂಥೀಯ ಸಂಘಟನೆ ಅನಗತ್ಯವಾಗಿ ಇದನ್ನು ರಾಜಕೀಯಗೊಳಿಸುತ್ತಿದೆ. ನಾವು ನಿಯಮ ಉಲ್ಲಂಘಿಸಿದ್ದರೆ, ಕಾನೂನು ಪ್ರಕಾರ ಕೈಗೊಳ್ಳಲಿ. ಎಂದು ತಾಜ್‌ಮಹಲ್ ಮಸೀದಿ ಇಂತೆಝಾಮಿಯಾ ಕಮಿಟಿ ಅಧ್ಯಕ್ಷ ಸೈಯದ್ ಇಬ್ರಾಹಿಂ ಝೈದಿ ಪ್ರತಿ ಸವಾಲು ಹಾಕಿದ್ದಾರೆ.

Comments are closed.