ರಾಷ್ಟ್ರೀಯ

ಕಂದಹಾರ್‌ಗೆ ಹೊರಟ ವಿಮಾನಕ್ಕೆ ಅಪಹರಣ ಭೀತಿ!

Pinterest LinkedIn Tumblr


ಹೊಸದಿಲ್ಲಿ: ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಹರಣದ ವದಂತಿ ಕೆಲ ಕಾಲ ಆತಂಕ ಸೃಷ್ಟಿಸಿತು. ದಿಲ್ಲಿ ಮತ್ತು ಕಂದಹಾರ್ ನಡುವಣ ಏರಿಯಾನಾ ಅಫ್ಘಾನ್ ಏರ್‌ಲೈನ್‌ ವಿಮಾನದೊಳಗೆ ಪೈಲಟ್‌ ಅಚಾತುರ್ಯದಿಂದ ಹೈಜಾಕ್ ಗುಂಡಿ ಒತ್ತಿದ್ದೇ ಈ ಆತಂಕಕ್ಕೆ ಕಾರಣವಾಗಿತ್ತು. ತಕ್ಷಣವೇ ಭದ್ರತಾ ಸಿಬ್ಬಂದಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಒಯ್ದು ತಪಾಸಣೆ ನಡೆಸಿದರು.

‘ಕಂದಹಾರ್‌ಗೆ ಹೊರಟಿದ್ದ ವಿಮಾನದ ಸಿಬ್ಬಂದಿ ಪ್ರಮಾದವಶಾತ್ ಹೈಜಾಕ್ ಗುಂಡಿ ಒತ್ತಿದ್ದರಿಂದ ಆತಂಕ ಉಂಟಾಯಿತು. ಕೂಡಲೇ ವಿಮಾನವನ್ನು ದೂರಕ್ಕೆ ಒಯ್ದು ತಪಾಸಣೆ ನಡೆಸಿದಾಗ ಸತ್ಯಾಂಶ ಬಯಲಾಯಿತು. ಕೊನೆಗೆ 3:30ಕ್ಕೆ ವಿಮಾನ ಪ್ರಯಾಣ ಬೆಳೆಸಿತು’ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಅಲಾರಂ ಮೊಳಗಿದ ತಕ್ಷಣ ಏರ್‌ಪೋರ್ಟ್‌ ಭದ್ರತಾ ಸಿಬ್ಬಂದಿ ವಿಮಾನವನ್ನು ಸುತ್ತುವರಿದು ವಶಕ್ಕೆ ತೆಗೆದುಕೊಂಡರು. ಪೈಲಟ್‌ನ ಅಚಾತುರ್ಯದಿಂದ ಈ ಪ್ರಮಾದವಾಗಿದೆ. ಪೈಲಟ್‌ ಈ ಬಗ್ಗೆ ಲಿಖಿತವಾಗಿ ಒಪ್ಪಿಕೊಂಡ ಬಳಿಕ ವಿಮಾನದ ಪ್ರಯಾಣಕ್ಕೆ ಅನುಮತಿ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ವಿಮಾನದಲ್ಲಿ 9 ಮಂದಿ ಸಿಬ್ಬಂದಿ ಹಾಗೂ 1 ಮಗುವೂ ಸೇರಿದಂತೆ 124 ಪ್ರಯಾಣಿಕರಿದ್ದರು. ಈ ವಿಮಾನಕ್ಕೆ ಜೆಟ್ ಏರ್‌ವೇಸ್‌ ಭದ್ರತಾ ಸೇವೆ ಒದಗಿಸುತ್ತಿದೆ.

Comments are closed.