ರಾಷ್ಟ್ರೀಯ

ಪ್ರೀತಿಸಿ ವಿವಾಹವಾದ ದಂಪತಿಗೆ ಚೆನ್ನಾಗಿ ಥಳಿಸಿ ಮೂತ್ರ ಕುಡಿಯುವಂತೆ ಒತ್ತಾಯ

Pinterest LinkedIn Tumblr


ಭೂಪಾಲ್‌: ಕುಟುಂಬದ ವಿರೋಧದ ಮಧ್ಯೆಯೇ ಮದುವೆಯಾಗಿದ್ದ ನವ ಜೋಡಿಯನ್ನು ಥಳಿಸಿ ಬಲವಂತವಾಗಿ ಮೂತ್ರ ಕುಡಿಯುವಂತೆ ಒತ್ತಾಯಿಸಿರುವ ಘಟನೆ ಬುಡಕಟ್ಟು ಪ್ರಾಬಲ್ಯವಿರುವ ಅಲಿರಾಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಮೂಲಗಳ ಪ್ರಕಾರ, ರಮೇಶ್‌ ಅಲಿಯಾಸ್‌ ಹಿತೇಶ್‌(21) ಮತ್ತು ಪತ್ನಿ ನಾನ್ಕಿಬಾಯಿ(19) ಇಬ್ಬರನ್ನು ಅವರ ಚಿಕ್ಕಪ್ಪನ ಮನೆಯಿಂದ ಜು. 25ರಂದು ಅಪಹರಿಸಲಾಗಿತ್ತು.

ಆಗ ರಮೇಶ್‌ನನ್ನು ಕಟ್ಟಿಹಾಕಿ ಚೆನ್ನಾಗಿ ಥಳಿಸಲಾಗಿದೆ ಮತ್ತು ಮಹಿಳೆಯನ್ನು ಥಳಿಸಿ ಆಕೆಯ ಕೂದಲನ್ನು ಕತ್ತರಿಸಿದ್ದಾರೆ. ಅಲ್ಲದೆ ದಂಪತಿಗಳಿಬ್ಬರಿಗೂ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿದ್ದಾರೆ.

ಇದಾದ ನಂತರ ದಂಪತಿಯನ್ನು ಬಿಡುಗಡೆಗೊಳಿಸಿದ ಆರೋಪಿಗಳು ನಾನ್ಕಿಬಾಯಿಯ ಪಾಲಕರ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ಈ ರೀತಿ ಹಿಂಸೆ ನೀಡಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ದಂಪತಿ ಪೊಲೀಸರಿಗೆ ದೂರನ್ನು ನೀಡಿದ್ದು, ಯುವತಿಯ ತಂದೆ, ಆಕೆಯ ಚಿಕ್ಕಪ್ಪ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಎರಡೂವರೆ ತಿಂಗಳ ಹಿಂದೆಯಷ್ಟೇ ಯುವಕ ಯುವತಿ ಓಡಿಹೋಗಿ ಮದುವೆಯಾಗಿದ್ದರು. ಬುಡಕಟ್ಟು ಪಂಚಾಯಿತಿಯಲ್ಲಿ ರಮೇಶ್‌ ಕುಟುಂಬದವರಿಗೆ 70 ಸಾವಿರ ದಂಡವನ್ನು ವಿಧಿಸಿದ್ದರು. ರಮೇಶ್‌ನ ಕುಟುಂಬವು ಎರಡು ಮೇಕೆಗಳೊಂದಿಗೆ ಹಣವನ್ನು ನೀಡಿದ್ದರು ಕೂಡ ಯುವತಿ ಮನೆಯವರು ಮದುವೆಯನ್ನು ಒಪ್ಪಿರಲಿಲ್ಲ.

Comments are closed.