ರಾಷ್ಟ್ರೀಯ

ವಘೇಲಾ ಪುತ್ರ ಬಿಜೆಪಿಗೆ, ಕಾಂಗ್ರೆಸ್‌ಗೆ ಹಿನ್ನಡೆ

Pinterest LinkedIn Tumblr


ಅಹ್ಮದಾಬಾದ್‌ : ಗುಜರಾತ್‌ ರಾಜಕೀಯ ಹುದ್ದರಿ ಶಂಕರ್‌ಸಿಂಗ್‌ ವಘೇಲಾ ಅವರ ಪುತ್ರ ಮತ್ತು ಮಾಜಿ ಕಾಂಗ್ರೆಸ್‌ ಶಾಸಕ ಮಹೇಂದ್ರ ಸಿಂಗ್‌ ವಘೇಲಾ ಅವರು ಇಂದು ಶುಕ್ರವಾರ ಔಪಚಾರಿಕವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ. ಈ ರಾಜಕೀಯ ವಿದ್ಯಮಾನವು ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷಕ್ಕೆ ಒದಗಿರುವ ದೊಡ್ಡ ಹಿನ್ನಡೆಯೆಂದು ತಿಳಿಯಲಾಗಿದೆ.

ಗಾಂಧಿನಗರದಲ್ಲಿನ ಕರ್ಣವತಿ ಯುನಿವರ್ಸಿಟಿಯಲ್ಲಿ ಏರ್ಪಡಿಸಲಾಗಿರುವ ಯುವ ಸಂಸದೀಯ ಕಾರ್ಯಕ್ರಮದ ಪಾರ್ಶ್ವದಲ್ಲಿ ಗುಜರಾತ್‌ ಬಿಜೆಪಿ ಮುಖ್ಯಸ್ಥ ಜಿತೂಭಾಯಿ ವಘಾನಿ ಅವರು ಈ ವಿಷಯವನ್ನು ಪ್ರಕಟಿಸಿದರು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇಂದು ಯೂತ್‌ ಪಾರ್ಲಿಮೆಂಟ್‌ ಉದ್ಘಾಟಿಸುವರು.

ಅಮಿತ್‌ ಶಾ ಅವರು ತಮ್ಮ ಹುಟ್ಟೂರಿಗೆ ಬಂದ ಕೇವಲ 48 ತಾಸುಗಳ ಒಳಗೆ ಈ ರಾಜಕೀಯ ವಿದ್ಯಮಾನ ನಡೆದಿದೆ. ರಾಜಕೀಯ ನಿಷ್ಠಾಂತರಗಳನ್ನು ರೂಪಿಸುವುದಕ್ಕೆ ಹೆಸರಾಗಿರುವ ಅಮಿತ್‌ ಶಾ ಅವರು ಮೊನ್ನೆ ಗುರುವಾರ ಅಹ್ಮದಾಬಾದಿಗೆ ಬಂದಿದ್ದರು. ಇಂದು ಶನಿವಾರ ಅವರು ನಸುಕಿನ ವೇಳೆ ಸಾಂಪ್ರದಾಯಿ ಜಗನ್ನಾಥ ರಥಯಾತ್ರೆಯ ಪವಿತ್ರ ಮಂಗಳ ಆರತಿಗೆ ಚಾಲನೆ ನೀಡಿದರು.

ಮಹೇಂದ್ರ ಸಿಂಗ್‌ ವಘೇಲಾ ಅವರ ತಂದೆ ಶಂಕರ್‌ ಸಿಂಗ್‌ ವಘೇಲಾ ಅವರು 2014ರಲ್ಲಿ ಬಿಜೆಪಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ ಸೇರಿದ್ದರು. ಹಾಗಿದ್ದರೂ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಹಾಗೂ ಈಗ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದಾರೆ.

Comments are closed.