ರಾಷ್ಟ್ರೀಯ

17 ದಿನ ಮೊದಲೇ ದೇಶವನ್ನು ಸಂಪೂರ್ಣ ಆವರಿಸಿದ ಮುಂಗಾರು

Pinterest LinkedIn Tumblr


ಹೊಸದಿಲ್ಲಿ: ಪ್ರಸಕ್ತ ವರ್ಷ ಮುಂಗಾರು ನಿಗದಿತ ಅವಧಿಗಿಂತ 17 ದಿನ ಮೊದಲೇ ಸಂಪೂರ್ಣ ದೇಶವನ್ನು ತಲುಪಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.

ರಾಜಸ್ಥಾನದ ಶ್ರೀಗಂಗಾನಗರ್‌ ಪ್ರದೇಶಕ್ಕೂ ಮಳೆ ತಲುಪಿದ್ದು, ನಿಗದಿಯಂತೆ ಅಲ್ಲಿ ಜುಲೈ 15ಕ್ಕೆ ಸಾಮಾನ್ಯವಾಗಿ ಮುಂಗಾರು ಪ್ರವೇಶವಾಗುತ್ತಿತ್ತು. ಆದರೆ ಈ ಬಾರಿ ಅದಕ್ಕೂ ಮುಂಚಿತವಾಗಿ ತಲುಪಿದೆ.

ಹವಾಮಾನ ಇಲಾಖೆಯ ಹೆಚ್ಚುವರಿ ಪ್ರಧಾನ ನಿರ್ದೇಶಕ ಮೃತ್ಯುಂಜಯ್ ಮೋಹಪತ್ರ ಮುಂಗಾರು ದೇಶವನ್ನು ಆವರಿಸಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಒಟ್ಟಾರೆಯಾಗಿ ಜುಲೈ 1ಕ್ಕೆ ಮಳೆ ಎಲ್ಲ ಪ್ರದೇಶಗಳನ್ನು ತಲುಪುತ್ತದೆ.

ಆದರೆ ಈ ಬಾರಿ ವಾಡಿಕೆಗಿಂತ ಉತ್ತಮ ಮಳೆಯಾಗುತ್ತಿದ್ದು, ಎಲ್ಲ ಕಡೆಯೂ ತಲುಪಿದೆ. ಜೂನ್‌ 1ರಿಂದ ಮಳೆಗಾಲ ಆರಂಭವಾದರೆ ಸೆ. 30ರವರೆಗೆ ಮಳೆ ಇರುತ್ತದೆ ಎಂದು ಮೋಹಪತ್ರ ತಿಳಿಸಿದ್ದಾರೆ. ಪ್ರಸಕ್ತ ವರ್ಷ ಮುಂಗಾರು ದೇಶವನ್ನು ಮೇ 29ರಂದು ಪ್ರವೇಶಿಸಿತ್ತು.

Comments are closed.