ರಾಷ್ಟ್ರೀಯ

ತಂದೆಯ ಸಾವು; ಪಶ್ಚಾತ್ತಾಪದಿಂದ ಆತ್ಮಹತ್ಯೆಗೆ ಯತ್ನಿಸಿದ ಪುತ್ರ

Pinterest LinkedIn Tumblr


ರಾಜಕೋಟ್‌: ಕ್ಷುಲ್ಲಕ ಕಾರಣಕ್ಕಾಗಿ ಅಪ್ಪ-ಮಗನ ಜತೆ ನಡೆದ ಜಗಳ ತಂದೆಯ ಸಾವಿನಲ್ಲಿ ಅಂತ್ಯಕಂಡಿದೆ.

ಅಮರ್‌ಸಿಂಹ ಸದಾಮಿಯಾ (60) ಮೃತ ದುರ್ದೈವಿ. ಏಪ್ರಿಲ್ 14ರಂದು ಸುರೇಂದ್ರನಗರ್ ಜಿಲ್ಲೆಯ ಚೋಟಿಲ ತಾಲೂಕಿನ ಪಿಯಾವ ಗ್ರಾಮದಲ್ಲಿ ಅಮರ್‌ಸಿಂಹ ಸದಾಮಿಯಾ ಹಾಗೂ ಪುತ್ರ ಮಾಜ್ವಿ ಸದಾಮಿಯಾ ಜತೆ ಜಮೀನು ವಿಷಯದಲ್ಲಿ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದಾಗ ಮಾಜ್ವಿ ಸದಾಮಿಯಾ ತಂದೆಯನ್ನು ಹೊಡೆಯಲು ಹೋಗಿ ತಳ್ಳಿದ್ದಾನೆ.

ತಲೆಗೆ ಪೆಟ್ಟು ಬಿದ್ದಿದರಿಂದ ಅಮರ್‌ಸಿಂಹ ಸದಾಮಿಯಾ ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಯಿತು.

ತೀವ್ರ ಗಾಯಗೊಂಡು ಆಸ್ಪತ್ಪೆ ಸೇರಿದ್ದ ಅಮರ್‌ಸಿಂಹ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಇದನ್ನು ತಿಳಿದು ತೀರಾ ಖಿನ್ನತೆಗೆ ಒಳಗಾದ ಪುತ್ರ ಮಾಜ್ವಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಂದೆಯ ಜತೆ ನಡೆಸಿದ ಜಗಳದಿಂದ ಮಾಜ್ವಿ ಪಶ್ಚಾತ್ತಾಪಕ್ಕೂ ಒಳಗಾಗಿದ್ದಾನೆ.

ಆತ್ಮಹತ್ಯೆಗೆ ಶರಣಾಗಲು ಹೋಗುತ್ತಿದ್ದ ಸಂದರ್ಭದಲ್ಲಿ ಮಾಜ್ವಿಯನ್ನು ಪೊಲೀಸರು ಬಂಧಿಸಿದ್ದಾರೆ.

ತೋಟದಲ್ಲಿ ಗುಂಡಿ ತೊಡುವ ವಿಷಯದಲ್ಲಿ ಅಪ್ಪ-ಮಗನ ನಡುವೆ ಗಲಾಟೆ ನಡೆದಿತ್ತು. ಅಮರ್‌ಸಿಂಹ ಅವರ ಪತ್ನಿ ಕಾಂಕು ಸಾದಾಮಿಯಾ ನೀಡದ ದೂರಿನನ್ವಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಈ ಮೊದಲು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಮರ್‌ ಸಿಂಹ ನಿಧನದಿಂದಾಗಿ ಕೊಲೆ ಪ್ರಕರಣ ದಾಖಸಿಕೊಂಡಿದ್ದಾರೆ.

Comments are closed.