ರಾಷ್ಟ್ರೀಯ

ತ್ರಿಪುರಾ ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ಮೊಳಗಿದ ರಾಷ್ಟ್ರಗೀತೆ!

Pinterest LinkedIn Tumblr


ಅಗರ್ತಲಾ: ಸತತ 25 ವರ್ಷಗಳ ಎಡಪಕ್ಷದ ಆಡಳಿತ ಅಂತ್ಯಗೊಂಡು ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿರುವ ತ್ರಿಪುರಾ ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಗೀತೆ ಮೊಳಗಿತು.

ಹೊಸದಾಗಿ ರಚನೆಯಾಗಿರುವ ಬಿಜೆಪಿ ಸರಕಾರದ ಮೊದಲ ಅಧಿವೇಶನದಲ್ಲಿ ರೆಬತಿ ಮೋಹನ್ ದಾಸ್ ಅವರನ್ನು ಸಭಾಪತಿಯಾಗಿ ಆಯ್ಕೆ ಮಾಡಲಾಯಿತು.

ವಿಧಾನಸಭೆಯಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಪತ್ರಕರ್ತರು ಎದ್ದು ನಿಂತು ಗೌರವ ಸಲ್ಲಿಸಿದರು.

ಪ್ರತಿದಿನ ರಾಷ್ಟ್ರಗೀತೆ ಮೊಳಗಿಸಲು ಪ್ರಯತ್ನಿಸುತ್ತೇವೆ ಎಂದು ವಿಧಾನಸಭೆ ಕಾರ್ಯದರ್ಶಿ ಬಾಮ್ದೇಬ್ ಮಜುಂದರ್ ತಿಳಿಸಿದರು.

Comments are closed.