ರಾಷ್ಟ್ರೀಯ

ಕಾಶ್ಮೀರ ಕುರಿತ ವಿವಾದಾತ್ಮಕ ಹೇಳಿಕೆ: ಸಚಿವರಿಗೆ ಗೇಟ್‌ ಪಾಸ್‌ ನೀಡಿದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ

Pinterest LinkedIn Tumblr


ಶ್ರೀನಗರ: ಜಮ್ಮು ಕಾಶ್ಮೀರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹಣಕಾಸು ಸಚಿವ ಹಸೀಬ್‌ ದ್ರಾಬುಗೆ ಸಂಪುಟದಿಂದ ಗೇಟ್‌ ಪಾಸ್ ನೀಡಲಾಗಿದೆ.

ಹೊಸದಿಲ್ಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಹಸೀಬ್‌ ದ್ರಾಬು, ಕಾಶ್ಮೀರ ವಿವಾದ ರಾಜಕೀಯ ವಿಷಯವಲ್ಲ ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಕುಪಿತಗೊಂಡ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಹಣಕಾಸು ಸಚಿವ ಹಸೀಬ್‌ ದ್ರಾಬು ಅವರನ್ನು ಕೈ ಬಿಟ್ಟಿದ್ದಾರೆ.

ಈ ವಿಷಯವನ್ನು ಪಿಡಿಪಿ ಮೂಲಗಳು ಸ್ಪಷ್ಟಪಡಿಸಿವೆ. ರಾಜ್ಯಪಾಲ ಎನ್‌.ಎನ್‌. ವೋಹ್ರಾ ಅವರಿಗೆ ಪತ್ರೆ ಬರೆದಿದ್ದು ಸಂಪುಟದಿಂದ ಕೈ ಬಿಡಲಾಗಿದೆ ಎಂದು ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಮಾತನಾಡಿದ್ದ, ಹಸೀಬ್‌ ದ್ರಾಬು, ಜಮ್ಮು ಕಾಶ್ಮೀರವನ್ನು ವಿವಾದಾತ್ಮಕ ರಾಜ್ಯ ಎಂದು ನೋಡಬಾರದು. ರಾಜಕೀಯವನ್ನು ಇಲ್ಲಿ ಮಾಡಲೇ ಬಾರದು. ವಿವಾದ ರಾಜಕೀಯ ವಿಷಯವಲ್ಲ. ಕಳೆದ 50 ರಿಂದ 70 ವರ್ಷಗಳಲ್ಲಿ ಈ ಬಗ್ಗೆ ಸುಮ್ಮನೆ ಬೊಗಳುತ್ತಿದ್ದಾರೆ. ಆದರೆ ರಾಜಕೀಯ ಪರಿಸ್ಥಿತಿ ಮಾತ್ರ ಬದಲಾಗಲೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Comments are closed.