ರಾಷ್ಟ್ರೀಯ

ಕಲಬುರಗಿ ಆಸ್ಪತ್ರೆಗೆ ಹೆಣಗಳ ಕೊರತೆ!

Pinterest LinkedIn Tumblr


ಹೊಸದಿಲ್ಲಿ: ಕಲಬುರ್ಗಿಯಲ್ಲಿರುವ ನೌಕರರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೆಣಗಳ ಕೊರತೆಯಿಂದ ಸಂಶೋಧನೆ ಮತ್ತು ಶೈಕ್ಷಣಿಕ ಅಧ್ಯಯನ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಸಹಾಯಕ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಸೋಮವಾರ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

ಕಲಬುರಗಿಯ ಕಾಲೇಜಿನಲ್ಲಿ ವರ್ಷಕ್ಕೆ 100 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು ಇಲ್ಲಿ ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಹೆಣಗಳ ಕೊರತೆ ಉಂಟಾಗಿದೆ. ಕಾಲೇಜು ಆಡಳಿತ ಮಂಡಳಿಯು, ವೈದ್ಯಕೀಯ ಸಂಶೋಧನಾ ಉದ್ದೇಶಕ್ಕೆ ಮೃತದೇಹ ದಾನದ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಉತ್ತರಿಸಿದರು.

ಇಎಸ್‌ಐ ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ, ಆಂಧ್ರ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶ ಹೊಸದಿಲ್ಲಿಯಲ್ಲಿ ಒಟ್ಟು 1 ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನು ನಡೆಸಿಕೊಂಡು ಬರುತ್ತಿದೆ.

ನೌಕರರ ಹಾಗೂ ಶ್ರೀಸಾಮಾನ್ಯರ ಆರೋಗ್ಯ ಕಳಕಳಿಯೊಂದಿಗೆ ಇಎಸ್‌ಐಸಿ ನೇತೃತ್ವದಲ್ಲಿ ಪ್ರತಿಯೊಂದು ರಾಜ್ಯದಲ್ಲಿ ತಲಾ ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದೂ ಸಚಿವರು ತಿಳಿಸಿದ್ದಾರೆ.

ನಿಲ್ಲದ ಪ್ರತಿಭಟನೆ

· ಸಂಸತ್ತಿನ ಉಭಯ ಸದನಗಳಲ್ಲಿ ಸತತ 6ನೇ ದಿನವೂ ಪ್ರತಿಭಟನೆಯ ಸದ್ದು.

· ಕಾವೇರಿ ನಿರ್ವಹಣಾ ಮಂಡಳಿ ರಚನೆ, ಪಿಎನ್‌ಬಿ ಹಗರಣ, ಆಂಧ್ರಕ್ಕೆ ವಿಶೇಷ ಸ್ಥಾನಮಾನ ಆಗ್ರಹಿಸಿ ಎಐಎಡಿಎಂಕೆ,ಡಿಎಂಕೆ, ಟಿಡಿಪಿ, ಕಾಂಗ್ರೆಸ್‌ ಸದಸ್ಯರಿಂದ ಗದ್ದಲ. ಹಲವು ಬಾರಿ ಮುಂದೂಡಿಕೆ.

· ಕೋಲಾಹಲದ ನಡುವೆಯೇ, ಸಾಲ ಮಾಡಿ ಪರಾರಿಯಾಗುವ ಸುಸ್ತಿದಾರರ ಸ್ವತ್ತು ಜಪ್ತಿ ಮಾಡಿಕೊಳ್ಳುವ ವಿಧೇಯಕ ಲೋಕಸಭೆಯಲ್ಲಿ ಮಂಡನೆ.

Comments are closed.