ಹೊಸದಿಲ್ಲಿ : ಒಂಬತ್ತು ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿಪಡೆದ ಛತ್ತೀಸ್ಗಢದ ಸುಕ್ಮಾ ನಕ್ಸಲ್ ದಾಳಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಸರಕಾರದ ತಪ್ಪು ನೀತಿಗಳಿಂದಾಗಿ ದೇಶದ ಆಂತರಿಕ ಭದ್ರತೆ ಹದಗೆಡುತ್ತಿರುವುದನ್ನು ಈ ಘಟನೆಯು ಬಿಂಬಿಸುತ್ತದೆ ಎಂದವರು ಹೇಳಿದ್ದಾರೆ.
ಒಂದು ವರ್ಷದ ಹಿಂದೆ ನಕ್ಸಲರು ಸುಕ್ಮಾದಲ್ಲಿ ಇದೇ ರೀತಿಯ ಹೊಂಚು ದಾಳಿ ನಡೆಸಿ 12 ಮಂದಿ ಜವಾನರನ್ನು ಕೊಂದಿದ್ದರು. ಈಗ ಪುನಃ ಅದೇ ರೀತಿಯ ಘಟನೆಯ ಪುನರಾವರ್ತನೆಯಾಗಿದ್ದು ಈ ಬಾರಿ 9 ಯೋಧರು ಪ್ರಾಣ ತೆತ್ತಿದ್ದಾರೆ.
ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ನಕ್ಸಲರು ನಡೆಸಿರುವ ಸಿಆರ್ಪಿಎಫ್ ಯೋಧರ ಹತ್ಯೆಯನ್ನು ಖಂಡಿಸಿ ಈ ಘಟನೆಯು ಅತ್ಯಂತ ಹೃದಯ ವಿದ್ರಾವಕ ವಾಗಿದೆ ಎಂದು ಹೇಳಿದ್ದಾರೆ.
-ಉದಯವಾಣಿ
Comments are closed.