ಝಾನ್ಸಿ (ಉತ್ತರ ಪ್ರದೇಶ) : ಅಪಘಾತದಲ್ಲಿ ಕಾಲು ಕಳೆದಕೊಂಡ ಶಾಲಾ ವಾಹನದ ಕ್ಲೀನರ್ನ ತುಂಡಾದ ಕಾಲನ್ನೇ ಆಸ್ಪತ್ರೆಯ ಸಿಬ್ಬಂದಿ ತಲೆದಿಂಬಾಗಿಸಿದ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶ ಸರ್ಕಾರಿ ಸ್ವಾಮ್ಯದ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.
ಈ ಘಟನೆಯ ವಿಡಿಯೊ ಸುದ್ದಿ ವಾಹಿನಿಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿದೆ. ಅಲ್ಲದೆ ಇಲಾಖಾ ತನಿಖೆಗೂ ಆದೇಶಿಸಿದೆ.
ಮೌರಾಣಿಪುರದಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಕಾಲು ಕಳೆದುಕೊಂಡ ಕ್ಲೀನರ್ ಘನಶ್ಯಾಮ್ (28) ಅವರನ್ನು ಅಸ್ಪತ್ರೆಗೆ ಕರೆತರಲಾಗಿತ್ತು. ಸ್ಟ್ರೆಚರ್ನಲ್ಲಿ ಮಲಗಿದ್ದಾಗ ಆಸ್ಪತ್ರೆಯ ಸಿಬ್ಬಂದಿ ತುಂಡಾಗಿದ್ದ ಕಾಲನ್ನು ತಲೆದಿಂಬಾಗಿ ಇರಿಸಿದರು ಎಂದು ಗಾಯಾಳು ಹೇಳಿದ್ದಾರೆ.
Comments are closed.