ನಾಗ್ಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಒಮ್ಮತ ಮೂಡಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ ಆದರೆ ಆ ಜಾಗದಲ್ಲಿ ರಾಮ ಮಂದಿರ ಬಿಟ್ಟು ಬೇರೆ ಯಾವುದೇ ಕಟ್ಟಡ ಬರಲು ಬಿಡುವುದಿಲ್ಲ ಎಂದು ಆರ್ಎಸ್ಎಸ್ನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ಸುರೇಶ್ ಜೋಶಿ ‘ಭಯ್ಯಾಜಿ’ ಹೇಳಿದ್ದಾರೆ.
ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಮಾವೇಶದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿರುವ ಜೋಶಿ, ‘ ಅಯೋಧ್ಯೆಯಲ್ಲಿ ರಾಮ ಮಂದಿರ ಬರುವುದು ದಿಟ, ಆದರೆ ನಾವು ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತೇವೆ, ಅದರ ಆದೇಶಕ್ಕನುಗುಣವಾಗಿ ಮಂದಿರವನ್ನು ಕಟ್ಟಲಾಗುತ್ತದೆ ಎಂದು ಜೋಶಿ ನುಡಿದರು.
ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ನಾವು ಎಲ್ಲರ ಸಹಮತವನ್ನು ಬಯಸಿದ್ದೆವು, ಆದರೆ ಈ ವಿಚಾರದಲ್ಲಿ ಒಮ್ಮತದ ಮೂಲಕ ಮಂದಿರ ನಿರ್ಮಿಸುವುದು ಸುಲಭವಲ್ಲ ಎಂಬುದು ನಮಗೂ ಅನುಭವವಾಗಿದೆ ಎಂದು ಜೋಶಿ ಹೇಳಿದ್ದಾರೆ.
Comments are closed.