ನವದೆಹಲಿ: ಕೊಲೆ ಸಂಚು, ಭಯೋತ್ಪಾದನೆ ಕೃತ್ಯಗಳ ಆರೋಪಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಫಾರೂಕ್ ಟಕ್ಲಾನನ್ನು ದುಬೈನಿಂದ ಗಡೀಪಾರುಮಾಡಲಾಗಿದ್ದು ಸಿಬಿಐ ಅಧಿಕಾರಿಗಳು ಆತನನ್ನು ಬಂಧಿಸಿ ಭಾರತಕ್ಕೆ ಕರೆತರುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಗುರುವಾರ ಸಂಜೆ 4.45ರ ಸುಮಾರಿಗೆ ಮುಂಬೈಗೆ ಬರಲಿದ್ದು ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
1993 ಮುಂಬೈ ಸ್ಪೋಟದ ನಂತರ ತಲೆಮರೆಸಿಕೊಂಡಿದ್ದ ಹಾಗೂ ದಾವೂದ್ ಇಬ್ರಾಹಿಂನ ಎಲ್ಲಾ ಕೃತ್ಯಗಳಲ್ಲಿ ಭಾಗಿಯಾಗುತಿದ್ದ ಟಕ್ಲಾ.
-ಉದಯವಾಣಿ
Comments are closed.