ರಾಷ್ಟ್ರೀಯ

ಮದುವೆಯ ಮೆರವಣಿಗೆ (ಬಾರಾತ್‌)ಯ ಸಂಭ್ರಮದಲ್ಲಿ ಹಾರಿಸಿದ ಗುಂಡಿಗೆ ವರ ಬಲಿ

Pinterest LinkedIn Tumblr

ಹೊಸದಿಲ್ಲಿ: ಮದುವೆಯ ಮೆರವಣಿಗೆ (ಬಾರಾತ್‌)ಯ ಸಂಭ್ರಮದಲ್ಲಿ ಹಾರಿಸಿದ ಗುಂಡು ಅಕಸ್ಮಾತ್‌ ಆಗಿ ಕುದುರೆ ಮೇಲಿದ್ದ ವರನಿಗೆ ತಗುಲಿ ಆತ ಮೃತಪಟ್ಟಿದ್ದಾನೆ.

ಫರೀದಾಬಾದ್‌ನ ಸೀಮಾಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನಾಲ್ಕು ಮಂದಿಗೆ ಗುಂಡೇಟು ತಗುಲಿದೆ. ಒಂದು ಗುಂಡು ವರನ ತಲೆಯ ಹಿಂಭಾಗದಿಂದ ತಗುಲಿದೆ.ಇದರಿಂದಾಗಿ ವರ ಕುದುರೆಯಿಂದ ಕುಸಿದು ಬಿದ್ದಿದ್ದಾನೆ. ಮೊದಲಿಗೆ ವರನಿಗೆ ಎಲ್ಲಿಗೆ ಗುಂಡು ತಾಗಿತ್ತು ಎಂಬುದು ಅಲ್ಲಿದ್ದವರಿಗೆ ಗೊತ್ತಾಗಲಿಲ್ಲ. ಆತನ ರುಮಾಲು ಬಿಚ್ಚಿ ನೋಡಿದಾಗ ಗುಂಡು ತಾಗಿರುವುದು ಪತ್ತೆಯಾಗಿದೆ.

ಇಪ್ಪತ್ತಮೂರು ವರ್ಷದ ವರ ಆನಂದ್‌ ವಿಹಾರ್‌ ಬಸ್‌ ಟರ್ಮಿನಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ವರನ ಸೋದರಿಯ ಮಗನೇ ಗುಂಡು ಹಾರಿಸಿದ್ದು, ಆತ ಪರಾರಿಯಾಗಿದ್ದಾನೆ.

Comments are closed.