ಮುಂಬೈ: ಸಾವಿರಾರು ಕೋಟಿ ರೂ. ಸಾಲ ಮಾಡಿ ಸಾಲ ತೀರಿಸದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಂಚಕ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಬ್ಯಾಂಕ್ ಸಾರ್ವಜನಿಕವಾಗಿ ನನ್ನ ಸಾಲದ ಕುರಿತು ಹೇಳಿಕೆ ನೀಡಿ ಸಾಲ ಮರುಪಾವತಿಯ ಎಲ್ಲಾ ಅವಕಾಶದ ಬಾಗಿಲುಗಳನ್ನು ಮುಚ್ಚಿದೆ ಎಂದು ಆರೋಪಿಸಿದ್ದಾರೆ.
ಫೆಬ್ರವರಿ 13 ರಂದು 15ರಂದು ನಾನು ಬ್ಯಾಂಕ್ಗೆ ಪತ್ರ ಬರೆದು ನಾನು ನೀಡಿದ ಕೊಡುಗೆಯನ್ನು ತಿರಸ್ಕರಿಸಿ ನೀವು ಸಾರ್ವಜನಿಕವಾಗಿ ನನ್ನ ಸಾಲದ ಕುರಿತು ಹೇಳಿಕೆ ನೀಡಿದ್ದೀರಿ. ಇದರಿಂದಾಗಿ ನನ್ನ ಮತ್ತು ನನ್ನ ಕಂಪನಿಯ ಘನತೆಗೆ ಧಕ್ಕೆಯಾಗಿದೆ ಎಂದು ಪಿಎನ್ಬಿ ಹಗರಣದ ಪ್ರಮುಖ ಆರೋಪಿ ನೀರವ್ ಬ್ಯಾಂಕ್ ವಿರುದ್ಧವೇ ಆರೋಪ ಹೊರಿಸಿದ್ದಾರೆ.
ಹಗರಣ ಬಯಲಿಗೆ ಬಂದ ನಂತರ ಫೆಬ್ರವರಿ 16 ರಂದು ಬ್ಯಾಂಕಿನ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ ನೀರವ್ ಈ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಪತ್ರದಲ್ಲಿ ನಾನು ಬ್ಯಾಂಕಿನಿಂದ ಪಡೆದಿರುವುದು ಕೇವಲ 5000 ಕೋಟಿ ರೂ. ಸಾಲ ಮಾತ್ರ. ಆದರೆ ಬ್ಯಾಂಕ್ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಪಿಎನ್ಬಿ ಅತಿಆಸೆಯಿಂದ ತೆಗೆದುಕೊಂಡಿರುವ ಕ್ರಮದಿಂದಾಗಿ ಸಾಲ ತೀರಿಸಲು ಇದ್ದ ಎಲ್ಲ ಸಾಧ್ಯತೆಗಳನ್ನು ಮುಚ್ಚಿ ಹಾಕಿದೆ ಎಂದು ಬ್ಯಾಂಕ್ ವಿರುದ್ಧವೇ ಹರಿಹಾಯ್ದಿದಿದ್ದಾರೆ.
ಈ ಮೂಲಕ ತಾವು ಭಾರತಕ್ಕೆ ಮರಳಿ ಸಾಲ ಮರುಪಾವತಿ ಕುರಿತು ಭರವಸೆ ಬೇಡ ಎಂದು ಪರೋಕ್ಷವಾಗಿ ಸಂದೇಶವನ್ನು ಬ್ಯಾಂಕಿಗೆ ರವಾನಿಸಿದ್ದಾರೆ.
ನೀರವ್ ಮೋದಿ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದ್ದು, ದೇಶಾದ್ಯಂತ ನೀರವ್ಗೆ ಸೇರಿದ ಕಂಪನಿಗಳು ಮತ್ತು ಆಸ್ತಿಗಳ ಮೇಲೆ ದಾಳೆ ನಡೆಸುತ್ತಿದ್ದಾರೆ. ಜತೆಗೆ ಹಲವರನ್ನು ಬಂಧಿಸಿ ಪಡೆದು ವಿಚಾರಣೆ ನಡೆಸುತ್ತಿವೆ.
Comments are closed.