ಮನೋರಂಜನೆ

ರಜನಿ ಕೇಸರಿ ಬಣ್ಣ ಬಳಸದಿದ್ದರೆ ಕೈ ಜೋಡಿಸುವೆ: ಕಮಲ್‌

Pinterest LinkedIn Tumblr


ಹೊಸದಿಲ್ಲಿ: ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ರಜನಿಕಾಂತ್‌ ಜತೆ ಮೈತ್ರಿ ಮಾಡಿ ಪಕ್ಷ ರಚನೆ ಕುರಿತು ಮೌನ ಮುರಿದಿರುವ ನಟ ಕಮಲ್‌, ರಜನಿಯವರ ಪಕ್ಷದಲ್ಲಿ ಕೇಸರಿ ಬಣ್ಣವಿರಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ರಜನಿಯೊಂದಿಗೆ ಕೈಜೋಡಿಸುತ್ತೀರಾ ಎಂದು ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿರುವ ಕಮಲ್‌, ಸೂಪರ್ ಸ್ಟಾರ್ ರಜನಿಕಾಂತ್ ಅವರದ್ದು ಕೇಸರಿ ಬಣ್ಣವಲ್ಲ ಎಂದು ಭಾವಿಸುತ್ತೇನೆ. ಒಂದೊಮ್ಮೆ ಅವರದ್ದು ಕೇಸರಿ ಬಣ್ಣವಾದರೆ ಅವರೊಂದಿಗೆ ಮೈತ್ರಿ ಸಾಧ್ಯವಿಲ್ಲ ಎಂದು ನಟ ಕಮಲ್ ಹಾಸನ್ ತಿಳಿಸಿದ್ದಾರೆ.

ರಜನಿಕಾಂತ್ ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕಮಲ್‌, ‘ ಸೈದ್ದಾಂತಿಕ ಭಿನ್ನತೆ ಕುರಿತು ಸ್ಪಷ್ಟವಾಗಿ ಕಂಡಿಲ್ಲ, ಆದರೆ ತಮಿಳುನಾಡಿನ ಏಳ್ಗೆ ಸಲುವಾಗಿ ರಜನಿಯೊಂದಿಗೆ ಕೈಜೊಡಿಸುತ್ತೇನೆ, ಅಥವಾ ನನ್ನ ಜತೆ ಕೈಜೋಡಿಸಲು ಬರುವವರಿಗೂ ಮುಕ್ತ ಅವಕಾಶವಿದೆ ಎಂದು ಹೇಳಿದ್ದಾರೆ.

ಜಯಲಲಿತಾ ಬಳಿಕ ತಮಿಳುನಾಡಿನ ರಾಜಕೀಯದಲ್ಲಿ ಹಲವಾರು ಬದಲಾವಣೆ ಕಾಣಿಸಿದ್ದು, ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರು ತಮಿಳುನಾಡಿನಲ್ಲಿ ಮತ್ತೊಮ್ಮೆ ರಾಜಕೀಯ ಬದಲಾಣೆ ತರುವವರಂತೆ ಕಾಣುತ್ತಿದ್ದಾರೆ. ತಮಿಳುನಾಡಿನಲ್ಲಿ ಆಡಳಿತದ ಗುಣಮಟ್ಟವನ್ನು ಹೆಚ್ಚಿಸುವುದು ಇಬ್ಬರ ಬಯಕೆಯಾಗಿದೆ.

Comments are closed.