ರಾಷ್ಟ್ರೀಯ

ಆರೆಸ್ಸೆಸ್ ಶಾಖೆಗಳಲ್ಲಿ ಭಾಗವಹಿಸದವರು ಹಿಂದುಗಳೇ ಅಲ್ಲ: ಬಿಜೆಪಿ ಶಾಸಕ

Pinterest LinkedIn Tumblr

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್) ದೈನಂದಿನ ಸಭೆ (ಶಾಖೆ)ಯಲ್ಲಿ ಭಾಗವಹಿಸದವರು ಹಿಂದುಗಳೇ ಅಲ್ಲ ಎಂದು ಹೈದರಾಬಾದ್ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಹೇಳಿದ್ದಾರೆ.

ಮಧ್ಯಪ್ರದೇಶದ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ಒಂದು ಕಾರ್ಖಾನೆ ಇದ್ದಂತೆ. ಈ ಕಾರ್ಖಾನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತ ಮಹಾನ್‌ ವ್ಯಕ್ತಿಗಳು ಸೃಷ್ಠಿಯಾಗುತ್ತಾರೆ’ ಎಂದರು.

ಆರ್‌ಎಸ್‌ಎಸ್ ಶಾಖೆ ಹಾಗೂ ಸಭೆಗಳಿಗೆ ಹೋಗದವರು ಹಿಂದುಗಳೇ ಅಲ್ಲ. ಸಾಧ್ಯವಾದಷ್ಟು ಆರ್‌ಎಸ್‌ಎಸ್ ಶಾಖೆಗಳಲ್ಲಿ ಪಾಲ್ಗೊಳ್ಳಬೇಕೆಂದು ಒತ್ತಾಯಿಸಿದರು.

‘ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರು ಧರ್ಮದ ಹೊರತಾಗಿಯೂ ‘ಭಾರತ್ ಮಾತಾ ಕೀ ಜೈ’ ಹಾಗೂ ‘ವಂದೇ ಮಾತರಂ’ ಹೇಳಲೇಬೇಕು. ಹೇಳದವರು ದೇಶ ತೊರೆಯಬೇಕು. ಪ್ರಪಂಚದ ಯಾವುದೇ ರಾಷ್ಟ್ರವೂ ಶತ್ರು ರಾಷ್ಟ್ರ ಹಾಗೂ ಭಯೋತ್ಪಾದನೆ ಬೆಂಬಲಿಸುವವರನ್ನು ಸಹಿಸುವುದಿಲ್ಲ’ ಎಂದು ಕಿಡಿಕಾರಿದರು.

ದೇಶದಲ್ಲಿ ಹೊಲಸು ರಾಜಕೀಯ ಮಾಡುತ್ತಿರುವ ಓವೈಸಿ ಸಹೋದರರಿಂದ ಮುಸ್ಲಿಮರು ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಇಂಥವರ ದಾಳಕ್ಕೆ ಯಾರೂ ಬಲಿಯಾಗಬಾರದು ಎಂದು ಹೈದರಾಬಾದ್‌ನ ಶಾಸಕ ಟಿ ರಾಜಾ ಸಿಂಗ್ ಕರೆ ನೀಡಿದರು.

Comments are closed.