ಚೆನ್ನೈ: ಅವಿವಾಹಿತರಿಗೆಲ್ಲಾ ಒಂದು ಬ್ಯಾಡ್ ನ್ಯೂಸ್… ನೀವು ಮದುವೆಯಾಗಿಲ್ಲ ಇನ್ನೂ ಸಿಂಗಲ್ ಆಗಿಯೇ ಇದ್ದೀರೆಂದಾದರೆ ನಿಮಗೆ ತಮಿಳುನಾಡಿನ ಕೃಷಿ ವಿಶ್ವವಿದ್ಯಾಲಯದ ಬಟಾನಿಕಲ್ ಗಾರ್ಡನ್ ಒಳಗೆ ನೋ ಎಂಟ್ರಿ.
ಕೃಷಿ ವಿಶ್ವವಿದ್ಯಾಲಯವು ಇಲ್ಲಿನ ಪ್ರಸಿದ್ಧ ಬಟಾನಿಕಲ್ ಗಾರ್ಡನ್ಗೆ ಬ್ಯಾಚುಲರ್ಸ್ಗೆ ಪ್ರವೇಶವನ್ನು ನಿಷೇಧಿಸಿದೆ. ಉದ್ಯಾನದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಯನ್ನು ಮಟ್ಟಹಾಕಲು ಈ ನಿರ್ಧಾರವನ್ನು ಕೈಗೊಂಡಿದೆ.
ಗಾರ್ಡನ್ ಒಳಗೆ ಪ್ರವೇಶಿಸಬೇಕಾದರೆ ನಿಮ್ಮ ಗುರುತಿನ ಚೀಟಿಯನ್ನು ತೋರಿಸಿ ಒಳಗೆ ಪ್ರವೇಶ ಪಡೆಯಬೇಕಾಗಿದೆ. ಈ ಕಾಯ್ದೆ ಜಾರಿಗೆ ತಂದಾಗಿನಿಂದ ಸುಮಾರು 50 ರಷ್ಟು ಪ್ರವಾಸಿಗರು ಕಡಿಮೆಯಾಗಿದ್ದಾರೆ.
ಅಧ್ಯಯನಕ್ಕೋಸ್ಕರ ಈ ಉದ್ಯಾನದಲ್ಲಿ ಬಹಳಷ್ಟು ವೈದ್ಯಕೀಯ ಗಿಡಗಳನ್ನು ನೆಡಲಾಗಿದೆ. ಆದರೆ ಪ್ರೇಮಿಗಳು ಈ ಉದ್ಯಾನಕ್ಕೆ ಒಂದು ಅಲ್ಲಿನ ಗಿಡಗಳನ್ನು ಹಾಳುಗೆಡವುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅಲ್ಲಿ ನಡೆಯುವ ಅನೈತಿಕ ಚಟುವಟಿಕೆ ಹಾಗೂ ಅಸಭ್ಯವರ್ತನೆಯಿಂದ ಉಳಿದವರು ಉದ್ಯಾನಕ್ಕೆ ಆಗಮಿಸಲು ಮುಜುಗರವನ್ನುಂಟು ಮಾಡುತ್ತಿತ್ತು ಎನ್ನಲಾಗಿದೆ.
Comments are closed.