ರಾಷ್ಟ್ರೀಯ

ಮಹಾರಾಷ್ಟ್ರದ ದಹನು ಬಳಿ 40 ವಿದ್ಯಾರ್ಥಿಗಳಿದ್ದ ದೋಣಿ ದುರಂತ

Pinterest LinkedIn Tumblr


ಹೊಸದಿಲ್ಲಿ: ಮಹಾರಾಷ್ಟ್ರದ ದಹನು ಬಳಿ40 ಮಂದಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಶನಿವಾರ ಬೆಳಗ್ಗೆ ಮುಳುಗಡೆಯಾಗಿದೆ. ಸ್ಥಳದಿಂದ ಎರಡು ಮೃತದೇಹಗಳನ್ನು ಮೇಲೆತ್ತಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ವರದಿಗಳ ಪ್ರಕಾರ, 35 ಮಕ್ಕಳನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪಾಲ್ಘರ್‌ ಪೊಲೀಸ್‌ ಅಧೀಕ್ಷಕ ಮಂಜುನಾಥ್‌ ಸಿಂಗೆ ತಿಳಿಸಿದ್ದಾರೆ. ಯಾವುದೇ ಸಾವಿನ ಬಗ್ಗೆ ಖಚಿತವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸಮುದ್ರದಲ್ಲಿರುವ ಎಲ್ಲ ಹಡಗುಗಳ ಮಾರ್ಗ ಬದಲಿಸಲಾಗಿದೆ. ದಾಮನ್‌ನಿಂದ ಡೋರ್ನಿಯರ್‌ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಶೋಧ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಬೆಳಗ್ಗೆ 11:30ರ ವೇಳೆಗೆ ದೋಣಿ ಮುಳುಗಡೆಯಾಗುವಾಗ ತೀರದಿಂದ 2 ನಾಟಿಕಲ್‌ ಮೈಲುಗಳಷ್ಟು ದೂರದಲ್ಲಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ದೋಣಿಯಲ್ಲಿ ಮಿತಿಮೀರಿದ ಪ್ರಯಾಣಿಕರಿದ್ದರು. ಅಲ್ಲದೆ ವಿದ್ಯಾರ್ಥಿಗಳು ಜೀವರಕ್ಷಕ ಜಾಕೆಟ್‌ಗಳನ್ನು ಧರಿಸಿರಲಿಲ್ಲ.

ಇವರೆಲ್ಲ ದಹನುವಿನ ಕೆ.ಎಲ್‌ ಪೋಂಡಾ ಶಾಲೆಯ ವಿದ್ಯಾರ್ಥಿಗಳಾಗಿದ್ದು ಪಿಕ್ನಿಕ್‌ಗೆ ತೆರಳಿದ್ದರು.

Comments are closed.