ಕ್ರೀಡೆ

ರಹಾನೆಯನ್ನು ಬೇಡವೆಂದವರೇ ಅವರನ್ನೀಗ ಬಯಸುತ್ತಿದ್ದಾರೆ: ವಿರಾಟ್ ಕೊಹ್ಲಿ

Pinterest LinkedIn Tumblr


ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಮಧ್ಯಮ ಕ್ರಮಾಂಕದ ಕಲಾತ್ಮಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅವರನ್ನು ಕಡೆಗಣಿಸಿರುವುದು ಹೆಚ್ಚಿನ ವಿಮರ್ಶೆಗೆ ಕಾರಣವಾಗಿತ್ತು.

ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕನಾಗಿರುವ ಹೊರತಾಗಿಯೂ ರಹಾನೆ ಬದಲಿಗೆ ರೋಹಿತ್ ಶರ್ಮಾ ಅವರಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಎರಡೂ ಇನ್ನಿಂಗ್ಸ್‌ಗಳಲ್ಲೂ ರೋಹಿತ್ ವೈಫಲ್ಯವನ್ನು ಅನುಭವಿಸಿದರು.

ಇದೀಗ ದ್ವಿತೀಯ ಪಂದ್ಯದಿಂದಲೂ ರಹಾನೆ ಅವರನ್ನು ಹೊರಗಿರಿಸಲಾಗಿದೆ. ಈ ನಡುವೆ ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ಪ್ರತಿಕ್ರಿಯಿಸಿರುವ ನಾಯಕ ವಿರಾಟ್ ಕೊಹ್ಲಿ, ರಹಾನೆ ಬೇಡವೆಂದ ಜನರೇ ಅವರನ್ನೀಗ ಬಯಸುತ್ತಿರುವುದು ತಯಾಷೆಯಾಗಿ ಅನಿಸುತ್ತಿದೆ ಎಂದಿದ್ದಾರೆ.

ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ರಹಾನೆ ತಂಡದಲ್ಲಿರಬೇಕೆಂದು ಯಾರೂ ಬಯಸಿರಲಿಲ್ಲ. ಆದರೆ ಆಕಸ್ಮತಾಗಿ ಎಲ್ಲವೂ ಬದಲಾವಣೆಯಾಗಿದೆ ಎಂದರು.

ಕೇಟ್ ಟೌನ್ ಟೆಸ್ಟ್ ಪಂದ್ಯದಲ್ಲಿ ಭಾರತ 72 ರನ್ ಅಂತರದ ಸೋಲಿಗೊಳಗಾಗಿತ್ತು. ಇನ್ನೊಂದೆಡೆ ವಿದೇಶದಲ್ಲಿ ಉತ್ತಮ ಫಾರ್ಮ್ ಕಾಯ್ದುಕೊಂಡಿರುವ ಹೊರತಾಗಿಯೂ ರಹಾನೆ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ.

ನಮ್ಮ ಪಾಲಿಗೆ ತಂಡದಲ್ಲಿ ಉತ್ತಮ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ಹೊರಗಿನ ಹೇಳಿಕೆಗಳಿಗೆ ಆಸ್ಪದ ಕೊಡುವುದಿಲ್ಲ. ರಹಾನೆ ಓರ್ವ ಗುಣಮಟ್ಟದ ಆಟಗಾರನಾಗಿದ್ದು, ದಕ್ಷಿಣ ಆಫ್ರಿಕಾ ಸೇರಿದಂತೆ ವಿದೇಶದಲ್ಲಿ ಉತ್ತಮ ನಿರ್ವಹಣೆ ನೀಡಿದ್ದಾರೆ. ಬಹುಶ: ವಿದೇಶದಲ್ಲಿ ನಮ್ಮ ತಂಡದ ಅತ್ಯಂತ ಸ್ಥಿರವಾದ ಬ್ಯಾಟ್ಸ್‌ಮನ್ ಎಂದಿದ್ದಾರೆ.

ರಹಾನೆ ಹೊರಗಟ್ಟುವುದನ್ನು ಮಗದೊಮ್ಮೆ ಸಮರ್ಥಿಸಿಕೊಂಡಿರುವ ಕೊಹ್ಲಿ, ಸಮಕಾಲೀನ ಟೆಸ್ಟ್ ಫಾರ್ಮ್ ಪರಿಗಣಿಸಿ ರೋಹಿತ್ ಆಯ್ಕೆ ಮಾಡಲಾಗಿತ್ತು ಎಂದಿದ್ದರು.

Comments are closed.