ರಾಷ್ಟ್ರೀಯ

ಹೃದಯಾಘಾತದ ಬಳಿಕ ಚೇತರಿಸಿದ ಅನ್ಸಾರಿ ಮರಳಿ ಜೈಲಿಗೆ

Pinterest LinkedIn Tumblr


ಬಂಡಾ, ಉತ್ತರ ಪ್ರದೇಶ : ಕಳೆದ ಜನವರಿ 2ರಂದು ಹೃದಯಾಘಾತಕ್ಕೆ ಗುರಿಯಾಗಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಬಿಎಸ್‌ಪಿ ಶಾಸಕ ಮುಖ್‌ತಾರ್‌ ಅನ್ಸಾರಿ ಅವರು ಬಂಡಾ ಜೈಲಿಗೆ ಮರಳಿದ್ದಾರೆ.

ಅನ್ಸಾರಿ ಅವರ ಆರೋಗ್ಯ ವೈದ್ಯಕೀಯ ಪರೀಕ್ಷೆಗಳ ಪ್ರಕಾರ ಸ್ಥಿರವಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ನಿನ್ನೆ ಗುರುವಾರ ಲಕ್ನೋ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಅಂತೆಯೇ ಅವರನ್ನು ಬಿಗಿ ಭದ್ರತೆಯಲ್ಲಿ ಬಂಡಾ ಜೈಲಿಗೆ ಮರಳಿ ಕರೆತರಲಾಯಿತು ಎಂದು ಜೈಲರ್‌ ವಿವೇಕಶೀಲ ತ್ರಿಪಾಠಿ ಹೇಳಿದ್ದಾರೆ.

ಹಲವು ಕ್ರಿಮಿನಲ್‌ ಕೇಸುಗಳನ್ನು ಎದುರಿಸುತ್ತಿರುವ 55ರ ಹರೆಯದ ಅನ್ಸಾರಿ ಅವರನ್ನು ಬಂಡಾ ಜೈಲಿನಲ್ಲಿ ಇರಿಸಲಾಗಿದೆ. ಕಳೆದ ಜ.2ರಂದು ಜೈಲಿನಲ್ಲಿ ಅವರನ್ನು ಪತ್ನಿಯು ಕಾಣಲೆಂದು ಬಂದಿದ್ದಾಗ ಅನ್ಸಾರಿಗೆ ಹೃದಯಾಘಾತವಾಗಿತ್ತು. ಅದೇ ವೇಳೆ ಪತ್ನಿಗೂ ಎದೆ ನೋವು ಕಾಣಿಸಿಕೊಂಡು ಆಕೆಯನ್ನೂ ಲಕ್ನೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆಯೂ ಈಗ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

-ಉದಯವಾಣಿ

Comments are closed.