ಹೊಸದಿಲ್ಲಿ: ಕಾಂಗ್ರೆಸ್ನಿಂದ ಅಮಾನತುಗೊಂಡಿರುವ ನಾಯಕ ಮಣಿಶಂಕರ್ ಅಯ್ಯರ್ ನೀಡಿದ ನೀಚ ಹೇಳಿಕೆ ಶುಕ್ರವಾರವೂ ಪ್ರತಿಧ್ವನಿಸಿದೆ.
ಗುಜರಾತ್ನಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಮೋದಿ, ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿಯನ್ನು ಮುಗಿಸಿ ಬಿಡಿ. ಆಮೇಲೆ ನೋಡಿ ಭಾರತ-ಪಾಕಿಸ್ತಾನ ನಡುವೆ ಯಾವ ರೀತಿಯ ಶಾಂತಿ ಸ್ಥಾಪನೆ ಆಗುತ್ತದೆ ಎಂದು ಹೇಳಿದ್ದರು. ನಾನು ಮಾಡಿರುವ ತಪ್ಪಾದರೂ ಏನು ಎಂದು ಮೋದಿ ತಿಳಿಸಿದ್ದಾರೆ.
ಕೇವಲ ಬಡತನದಿಂದ ಬಂದಿದ್ದೇನೆ. ಚಹಾ ಮಾರುತ್ತಿದ್ದೆ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಮೋದಿ ಹೇಳಿದರು.
ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಯಾಗಬೇಕಾದರೆ ಏನು ಮಾಡಬೇಕು ಎಂದು ಪಾಕಿಸ್ತಾನದ ಚಾನೆಲ್ವೊಂದು ಮಣಿಶಂಕರ್ ಅಯ್ಯರ್ ಅವರನ್ನು ಕೇಳಿತ್ತು. ಅದಕ್ಕೆ ಮೊದಲು ಮೋದಿಯನ್ನು ಸರಿಸಿ. ನಂತರ ನಾವು ಮಾತನಾಡಬಹುದು ಎಂದಿದ್ದರು.
Comments are closed.